Advertisement

ಕುಷ್ಟಗಿ : 220 ಕ್ವಿಂಟಲ್ ಅಕ್ರಮ ಅಕ್ಕಿ ವಶ

11:38 PM Jan 10, 2021 | Team Udayavani |

ಕುಷ್ಟಗಿ: ಗಂಗಾವತಿಯಿಂದ ಗುಜರಾತಿಗೆ 220 ಕ್ವಿಂಟಲ್  ಅನ್ನಭಾಗ್ಯ ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿಯನ್ನು ಕುಷ್ಟಗಿಯ ಅಹಾರ ಇಲಾಖೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Advertisement

ಕಳೆದ ಜ.9ರ ಮಧ್ಯರಾತ್ರಿ ಗಂಗಾವತಿಯ ಶ್ರೀ ಸಾಯಿನಾಥ ಟ್ರೇಡರ್ಸ್ ಜನರಲ್ ಮರ್ಚಂಟ್ಸ್ ಮತ್ತು ಕಮಿಷನ್ ಏಜೆಂಟ್ ಎಪಿಎಂಸಿ ಯಾರ್ಡ್ ತಾವರಗೇರಾ ಕಂಪನಿಯವರಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಲೋಡ್ ಮಾಡಲಾಗಿತ್ತು. ಈ ಲಾರಿ ಕುಷ್ಟಗಿ ಮೂಲಕ ಗುಜರಾತ್  ಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಶಿರೆಸ್ತೇದಾರ ರಜನೀಕಾಂತ, ಅಹಾರ ನಿರೀಕ್ಷಕ ನಿತಿನ್ ಅಗ್ನಿ ಸದರಿ ಲಾರಿಯನ್ನು ಕ್ಯಾದಿಗುಪ್ಪ ಚಕ್ ಪೋಸ್ಟ್ ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು.

ಲಾರಿಯಲ್ಲಿ 220 ಕ್ವಿಂಟಲ್ 50 ಕೆ.ಜಿಯ 440 ಪ್ಲಾಸ್ಟಿಕ್ ಬ್ಯಾಗಗಳಿದ್ದವು. ಅಕ್ಕಿಯ ಮೌಲ್ಯ 5.72ಲಕ್ಷರೂ. ಅಂದಾಜಿಸಲಾಗಿದೆ. ಈ ಪ್ರಕರಣದಲ್ಲಿ ಲಾರಿ ಚಾಲಕ ರಾಜಸ್ಥಾನ ಮೂಲದ ಧನಂಜಯ ಅಲಿಯಾಸ್ ಧನಪಾಲ್ ತಂದೆ ದೇವಜೀ ಪಟೇಲ್, ಶಂಕರಲಾಲ್ ರಾಮಜೀ ಪಟೇಲ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣ ಕುಷ್ಟಗಿ ಠಾಣೆಯಲ್ಲಿ ಪಿಎಸೈ ತಿಮ್ಮಣ್ಣ ನಾಯಕ್ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next