Advertisement

ಅದಾಲತ್‌ನಲ್ಲಿ 2176 ಪ್ರಕರಣ ಇತ್ಯರ್ಥ

12:05 PM Dec 18, 2019 | Suhan S |

ಬಾಗಲಕೋಟೆ: ಜಿಲ್ಲಾ ನ್ಯಾಯಾಲಯದ ಅಧೀನದಲ್ಲಿ ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ ನಲ್ಲಿ ಒಟ್ಟು 6276 ಪ್ರಕರಣಗಳ ಪೈಕಿ 2176 ಪ್ರಕರಣಗಳಿಗೆ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

Advertisement

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅನಿಲ ಕಟ್ಟಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ಶಿಬಿರ ಕಾರ್ಯಕ್ರಮ ನಡೆಸಲಾಯಿತು. ಲೋಕ ಅದಾಲತ್‌ ಶಿಬಿರದಲ್ಲಿ ಒಟ್ಟು 6276 ಪ್ರಕರಣಗಳಲ್ಲಿ 1475 ವಾಜ್ಯ ಪೂರ್ವ ಪ್ರಕರಣಗಳು ಮತ್ತು 4801 ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳು ತೆಗೆದುಕೊಳ್ಳಲಾಗಿತ್ತು. ಈ ಪೈಕಿ 776 ವಾಜ್ಯ ಪೂರ್ವ ಹಾಗೂ 1400 ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳು ಸೇರಿ ಒಟ್ಟು 2176 ಪ್ರಕರಣಗಳು ಇತ್ಯರ್ಥ ಪಡಿಸಿ ರಾಜೀ ಸಂಧಾನ ಮಾಡಿಸಲಾಯಿತು.

ಈ ಎಲ್ಲ ಪ್ರಕರಣಗಳಿಗೆ ಅಂದಾಜು 8.88 ಕೋಟಿ ರೂ.ಗಳಿಗೆ ರಾಜಿ ಮಾಡಿಸಲಾಯಿತು. ಬಾಗಲಕೋಟೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಒಟ್ಟು 917 ಪ್ರಕರಣಗಳ ಪೈಕಿ 243 ಪ್ರಕರಣಗಳು ಇತ್ಯರ್ಥವಾದರೆ, ಬಾದಾಮಿ ಕೋರ್ಟ್‌ನಲ್ಲಿ 770 ಪ್ರಕರಣಗಳ ಪೈಕಿ 104, ಹುನಗುಂದ ಕೋರ್ಟ್‌ನಲ್ಲಿ 898 ಪ್ರಕರಣಗಳ ಪೈಕಿ 495, ಬೀಳಗಿ ಕೋರ್ಟ್‌ ನಲ್ಲಿ 377 ಪ್ರಕರಣಗಳ ಪೈಕಿ 30, ಮುಧೋಳ ಕೋರ್ಟ್‌ನಲ್ಲಿ 612 ಪ್ರಕರಣಗಳ ಪೈಕಿ 190, ಜಮಖಂಡಿ ಕೋರ್ಟ್‌ ನಲ್ಲಿ 735 ಪ್ರಕರಣಗಳ ಪೈಕಿ 281 ಹಾಗೂ ಬನಹಟ್ಟಿ ಕೋರ್ಟ್‌ನಲ್ಲಿ 292 ಪ್ರಕರಣಗಳ ಪೈಕಿ 57 ಪ್ರಕರಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು.

ಜಿಲ್ಲಾ ನ್ಯಾಯಾಲಯದ ಎಲ್ಲ ಅಧೀನ ನ್ಯಾಯಾಲಯಗಳಲ್ಲಿನ ಒಟ್ಟು 1475 ವಾಜ್ಯ ಪೂರ್ವ ಪ್ರಕರಣಗಳ ಪೈಕಿ 776 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು. ಲೋಕ ಅದಾಲತ್‌ ಶಿಬಿರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ ಸಂತೋಷ ಸಿ.ಬಿ. ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧಿಧೀಶರಾದ ಶೀಲಾ .ಎನ್‌, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಪ್ರಕಾಶ ವಿ., 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧಿಧೀಶ ಎಂಎಹೆಚ್‌ ಮೊಘಲಾನಿ, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧಿಧೀಶ ಆರ್‌.ಎಲ್‌. ಹೊನೊಲೆ, ಪ್ರಧಾನ ದಿವಾಣಿ ನ್ಯಾಯಾಧಿಧೀಶ ಪದ್ಮಾಕರ ವನಕುದ್ರಿ, ಹೆಚ್ಚುವರಿ ದಿವಾಣಿ ನ್ಯಾಯಾಧಿಧೀಶ ಮಹೇಶ ಚಂದ್ರಕಾಂತ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next