Advertisement

ಮಂಡ್ಯದಲ್ಲಿಂದು 209 ಕೋವಿಡ್ ಹೊಸ ಪ್ರಕರಣ; 263 ಮಂದಿ ಚೇತರಿಕೆ; ಇಬ್ಬರು ಸಾವು

07:48 PM Oct 08, 2020 | Mithun PG |

ಮಂಡ್ಯ: ಜಿಲ್ಲೆಯಲ್ಲಿ ಗುರುವಾರ ಕೋವಿಡ್ ನಿಂದ ಇಬ್ಬರು ಮೃತಪಟ್ಟಿದ್ದು, 209 ಹೊಸ ಪ್ರಕರಣ ಪತ್ತೆಯಾಗಿದೆ. 263 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.

Advertisement

ಮದ್ದೂರು ತಾಲ್ಲೂಕಿನ 63 ವರ್ಷದ ವೃದ್ಧೆ ಹಾಗೂ ಮಂಡ್ಯ ತಾಲ್ಲೂಕಿನ 78 ವರ್ಷದ ವೃದ್ಧರು ಕೋವಿಡ್ ಸೇರಿದಂತೆ ನ್ಯುಮೋನಿಯಾ, ತೀವ್ರ ಉಸಿರಾಟದ ತೊಂದರೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಿಂದ ಸಾವಿನ ಸಂಖ್ಯೆ 118ಕ್ಕೇರಿದೆ.

209 ಹೊಸ ಪ್ರಕರಣ:

ಮಂಡ್ಯ 62, ಮದ್ದೂರು 19, ಮಳವಳ್ಳಿ 22, ಪಾಂಡವಪುರ 35, ಶ್ರೀರಂಗಪಟ್ಟಣ 29, ಕೆ.ಆರ್.ಪೇಟೆ 26 ಹಾಗೂ ನಾಗಮಂಗಲದ 15, ಹೊರ ಜಿಲ್ಲೆಯ ಒಬ್ಬರು ಸೇರಿದಂತೆ ಒಟ್ಟು 209 ಮಂದಿಗೆ ಸೋಂಕು ಆವರಿಸಿದೆ. ಇದುವರೆಗೂ 12812 ಸೋಂಕು ಪ್ರಕರಣಗಳು ದಾಖಲಾಗಿವೆ.

2689 ಮಂದಿಗೆ ಪರೀಕ್ಷೆ:

Advertisement

759 ರ್ಯಾಪಿಡ್ ಹಾಗೂ 2008 ಮಂದಿ ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟು 2689 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದರು.

ಇದನ್ನೂ ಓದಿ:  ಕೃಷ್ಣಾ ನೀರಿನ ಮರು ಹಂಚಿಕೆ: ಸರ್ವಪಕ್ಷ ಸಭೆ ಕರೆಯಲು ಎಂ.ಬಿ ಪಾಟಿಲ್ ಆಗ್ರಹ

ಮಂಡ್ಯ 97, ಮದ್ದೂರು 31, ಮಳವಳ್ಳಿ 23, ಪಾಂಡವಪುರ 22, ಶ್ರೀರಂಗಪಟ್ಟಣ 14, ಕೆ.ಆರ್.ಪೇಟೆ 50 ಹಾಗೂ ನಾಗಮಂಗಲದ 26 ಮಂದಿ ಸೇರಿದಂತೆ ಒಟ್ಟು 263 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೂ 10950 ಮಂದಿ ಬಿಡುಗಡೆಯಾಗಿದ್ದಾರೆ.

1744 ಸಕ್ರಿಯ ಪ್ರಕರಣಗಳು:

ಜಿಲ್ಲೆಯಲ್ಲಿ 1744 ಸಕ್ರಿಯ ಪ್ರಕರಣಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ 483, ಖಾಸಗಿ ಆಸ್ಪತ್ರೆಗಳಲ್ಲಿ 138, ಕೋವಿಡ್ ಕೇರ್ ಸೆಂಟರ್‌ನಲ್ಲಿ 251 ಹಾಗೂ ಮನೆಗಳಲ್ಲಿ 872 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದರು.

ಇದನ್ನೂ ಓದಿ: ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ತಡೆಗೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next