Advertisement

ಮಾಣಿಕಪ್ರಭುಗಳ ಜಾತ್ರಾ ಮಹೋತ್ಸವ ಸಂಪನ್ನ

01:47 PM Dec 21, 2021 | Team Udayavani |

ಹುಮನಾಬಾದ: ತಾಲೂಕಿನ ಮಾಣಿಕ ನಗರದ ಮಾಣಿಕಪ್ರಭುಗಳ 204ನೇ ಜಯಂತಿ, ದತ್ತ ಜಯಂತಿಹಾಗೂ ಮಾಣಿಕಪ್ರಭುಗಳ ಜಾತ್ರಾಮಹೋತ್ಸವ ಸಂಗೀತ ದರ್ಬಾರ್‌ಹಾಗೂ ಶೋಭಾಯಾತ್ರೆ ಮೂಲಕ ಸೋಮವಾರ ಅಂತ್ಯಗೊಂಡಿತು.

Advertisement

ರವಿವಾರ ರಾತ್ರಿ ಪ್ರಭು ಸಂಸ್ಥಾನದಲ್ಲಿ ಡಾ| ಜ್ಞಾನರಾಜ ಮಾಣಿಕಪ್ರಭುಗಳುರಾಜಸಿಂಹಾಸನದ ಮೇಲೆ ಆಸೀನರಾಗಿವಿವಿಧ ಧಾರ್ಮಿಕ ಕಾರ್ಯಗಳನ್ನುಪೂರ್ಣಗೊಳಿಸಿದರು. ನಂತರಪ್ರಭು ಸಂಸ್ಥಾನದ ಕಾರ್ಯದರ್ಶಿಆನಂದರಾಜ ಪ್ರಭುಗಳು ಒಂದುವರ್ಷಗಳ ಕಾಲ ನಡೆದ ವಿವಿಧ ಕಾರ್ಯಗಳ ಕುರಿತು ವಿವರಿಸಿದರು.

ಸಂಸ್ಥಾನದ ಅಡಿಯಲ್ಲಿ ನಡೆಯುತ್ತಿರುವದಿ| ಮಾಣಿಕ ಪಬ್ಲಿಕ್‌ ಶಾಲೆಆರಂಭಗೊಂಡು 50ನೇ ವರ್ಷಾಚರಣೆ ಫೆ.1ರಂದು ಅದ್ದೂರಿಯಾಗಿನಡೆಯಲ್ಲಿದೆ. ಪ್ರಭು ಸಂಸ್ಥಾನಸಂಗೀತದಿಂದ ಗುರುತಿಸಿಕೊಂಡಿದ್ದು,ದೇಶದ ಖ್ಯಾತ ಸಂಗೀತ ಕಲಾವಿದರುಪ್ರಭುಗಳ ಸಂಜೀವಿನಿ ಸಮಾಧಿ ಎದುರಿಗೆ ಸೇವೆ ಸಲ್ಲಿಸಿದ್ದಾರೆ. ಪ್ರತಿವರ್ಷ ಅನೇಕ ಸಂಗೀತ ಕಲಾವಿದರುಇಲ್ಲಿಗೆ ಭೇಟಿ ನೀಡಿ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಇದೇ ವೇಳೆ ಪರಂಪರೆಯಂತೆ ಸಂಸ್ಥಾನಕ್ಕೆ ವಿಶೇಷ ಸೇವೆ ಸಲ್ಲಿಸಿದಭಕ್ತರಿಗೆ ಮಾಣಿಕ ಗೌರವ ಪುರಸ್ಕಾರನೀಡಿ ಸನ್ಮಾನಿಸಲಾಯಿತು. ಈ ಪೈಕಿ ಮಾಣಿಕರಾವ ಆಗ್ರಹಾರಕರ್‌, ರಾಮಬಿದಾವಂತ ಹಾಗೂ ಡಾ| ಸುನೀಲಬಿದಾವಂತ ದುಬಲಗುಂಡಿ, ಮಧುಕರಮಹರಾಜಬಸವಕಲ್ಯಾಣ,ಕೇಶವರಾವನಿಟ್ಟೂರಕರ್‌ ಅವರಿಗೆ ಮಾಣಿಕ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಮಹಾರಾಷ್ಟ್ರ ಪುಣೆಯ ವಿಜಯ ಕೊಪ್ಪರಕರ್‌, ಪಂಡಿತ ಜಯಂತ,ಪಂಡಿತ ಶ್ರೀಪಾದ ಹೆಗೆಡೆ, ಪಂಡಿತಅಜಯ ಸುಗಾಂವಕರ್‌ ಗಾಯನ ಸೇವೆಸಲ್ಲಿಸಿದರು. ಪಂಡಿತ ಜಾಧವ ಸತಾರಾಶಹನಾಯಿ ವಾದನ ಸೇವೆ ಸಲ್ಲಿಸಿದರು.ತೆಲಂಗಾಣ ಜಹಿರಾಬಾದ್‌ನ ಕು|ಇಶೀತಾ ಮತ್ತು ಈಶಾನಿ ಕುಲಕರ್ಣಿ ಭರತನಾಟ್ಯ ಪ್ರದರ್ಶನ ಸೇವೆ ಸಲ್ಲಿಸಿದ್ದು, ಇನ್ನೂ ಅನೇಕ ಕಲಾವಿದರು ಸಂಗೀತ ದರ್ಬಾರ್‌ನಲ್ಲಿ ಸಂಗೀತ ಸೇವೆ ಸಲ್ಲಿಸಿ ಪ್ರಭುಗಳಿಗೆ ನಮನ ‌ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next