Advertisement

ಇದು 1817 ಅಲ್ಲ, 2017 ರಾಜೇಗೆ ರಾಹುಲ್‌ ಟಾಂಗ್‌

07:00 AM Oct 23, 2017 | Team Udayavani |

ಹೊಸದಿಲ್ಲಿ: ಅಧಿಕಾರಿಗಳ ವಿರುದ್ಧ ಗುರುತರ ಆರೋಪಗಳಿದ್ದ ಹೊರತಾಗಿಯೂ ಅವರ ವಿರುದ್ಧ ತನಿಖೆಗೆ ಆದೇಶ ನೀಡುವುದು ರಾಜಸ್ಥಾನ ಸರಕಾರದ ಪರಾಮರ್ಶೆಗೆ ಬಿಟ್ಟ ವಿಚಾರ ಎಂಬ ಸುಗ್ರೀವಾಜ್ಞೆ ಬಗ್ಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು “ಮೇಡಂ ಮುಖ್ಯಮಂತ್ರಿ. ನಾವು ಈಗ 1817ನೇ ಇಸ್ವಿಯಲ್ಲಿ ಅಲ್ಲ. ಬದಲಾಗಿ 2017ರಲ್ಲಿ ಇದ್ದೇವೆ ಎಂದು ವಿನಮ್ರವಾಗಿ ತಿಳಿಸಲು ಇಚ್ಛಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಮುಖ್ಯಮಂತ್ರಿ ವಸುಂಧರಾ ರಾಜೇ ನೇತೃತ್ವದ ಸರಕಾರ ಹೊರಡಿಸಿದ ಸುಗ್ರೀವಾಜ್ಞೆಯ ಬಗ್ಗೆ ಮಾಧ್ಯಮ ವರದಿಯ ಫೋಟೋವನ್ನು ಕೂಡ ಟ್ಯಾಗ್‌ ಮಾಡಿದ್ದಾರೆ. 

Advertisement

ಹೆಚ್ಚು ಸಮಯ ಬಾಳದು: ಮತ್ತೂಂ ದೆಡೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಸಂದರ್ಶನವೊಂದರಲ್ಲಿ ಮಾತನಾಡಿ, ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಅತ್ಯಂತ ಜಾಗರೂ ಕತೆಯಿಂದ ಅಪಪ್ರ ಚಾರ ಮಾಡಿಕೊಂಡು ಬರು ತ್ತಿದೆ. ಇಂಥ ಕ್ರಮಗಳು ಹೆಚ್ಚು ಸಮಯ ಪರಿಣಾಮ ಬೀರಲಾರದು ಎಂದು ಹೇಳಿದ್ದಾರೆ. ಕೆಲ ಸಮಯ ದಿಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಸಾರ್ವಜನಿಕರು ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಜನರೂ ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್‌ ಮತ್ತಷ್ಟು ಬಲಶಾಲಿಯಾ ಗಬೇಕೆಂದು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next