Advertisement

ನಿರ್ಭಯಾ ಪ್ರಕರಣ: ಹ್ಯಾಂಗ್‌ಮನ್‌ ಹುಡುಕಾಟ

09:44 AM Dec 09, 2019 | Hari Prasad |

ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರಿಗಳನ್ನು ಇಡಲಾಗಿರುವ ತಿಹಾರ್‌ ಜೈಲಿನಲ್ಲಿ ಹ್ಯಾಂಗ್‌ಮನ್‌ (ಗಲ್ಲಿಗೇರಿಸುವ ವ್ಯಕ್ತಿ) ಕೊರತೆಯಿದ್ದು, ಈಗ ಗಲ್ಲಿಗೇರಿಸುವ ಸಿಬಂದಿಗಾಗಿ ತಿಹಾರ್‌ ಜೈಲಿನ ಅಧಿಕಾರಿಗಳು ದೇಶದ ಇತರೆ ಜೈಲುಗಳನ್ನು ಸಂಪರ್ಕಿಸಲು ಆರಂಭಿಸಿದ್ದಾರೆ.

Advertisement

ಉತ್ತರಪ್ರದೇಶದ ಜೈಲಿನ ಅಧಿಕಾರಿಗಳೊಂದಿಗೆ ಅನೌಪಚಾರಿಕ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಪರಾಧಿ ವಿನಯ್‌ ಶರ್ಮಾ ಸಲ್ಲಿಸಿ ರುವ ಕ್ಷಮಾದಾನ ಅರ್ಜಿ ತಿರಸ್ಕರಿಸುವಂತೆ ರಾಷ್ಟ್ರಪತಿಗೆ ಕೇಂದ್ರ ಗೃಹ ಇಲಾಖೆ ಶಿಫಾರಸು ಮಾಡಿದ್ದು, ರಾಷ್ಟ್ರಪತಿ ಕೋವಿಂದ್‌ ಕೂಡ ಅರ್ಜಿ ತಿರಸ್ಕರಿಸಿದರೆ ಸದ್ಯದಲ್ಲೇ ಅಪರಾಧಿಗಳು ಗಲ್ಲಿಗೇರಲಿದ್ದಾರೆ. ಹೀಗಾಗಿ ಜೈಲಧಿಕಾರಿಗಳು ಈಗಲೇ ತಯಾರಿ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next