Advertisement

20ರೂ. ಕಳವು: 41 ವರ್ಷಗಳ ಹೋರಾಟ ಸುಖಾಂತ್ಯ!

12:48 AM Jul 15, 2019 | Sriram |

ಗ್ವಾಲಿಯರ್‌: 20 ರೂ. ಕದ್ದ ಆರೋಪಕ್ಕೆ ಗುರಿಯಾಗಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 41 ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ಕೊನೆಗೂ ದೋಷಮುಕ್ತನಾಗಿ ನಿಟ್ಟು ಸಿರು ಬಿಟ್ಟಿದ್ದಾನೆ. ಗ್ವಾಲಿಯರ್‌ನ ಲೋಕ ಅದಾಲತ್‌ ಈತನನ್ನು ಕಳ್ಳನಲ್ಲ ಎಂದು ಘೋಷಿಸಿದೆ.

Advertisement

1978ರಲ್ಲಿ ನಾನು ಬಸ್‌ ಟಿಕೆಟ್‌ಗಾಗಿ ಸರತಿಯಲ್ಲಿ ನಿಂತಿದ್ದಾಗ ಇಸ್ಮಾಯಿಲ್‌ ಖಾನ್‌(ಈಗ ಇವರಿಗೆ 68 ವರ್ಷ) ಎಂಬಾತ ತನ್ನ ಜೇಬಿನಿಂದ 20 ರೂ.ಗಳನ್ನು ಕದ್ದಿದ್ದಾನೆ ಎಂದು ಬಾಬು ಲಾಲ್‌(ಈಗ 61 ವರ್ಷ ವಯಸ್ಸು) ಆರೋಪಿಸಿದ್ದರು. ಬಳಿಕ ಎಫ್ಐಆರ್‌ ದಾಖಲಾಗಿ, ಜಾಮೀನು ಕೂಡ ಸಿಕ್ಕಿತ್ತು. ಅನಂತರದ ದಿನಗಳಲ್ಲಿ ಕೋರ್ಟ್‌ಗೆ ಸರಿಯಾಗಿ ಹಾಜರಾಗಿಲ್ಲ ಎಂದು ಖಾನ್‌ನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಈಗ ಲೋಕ ಅದಾಲತ್‌ನಲ್ಲಿ ವಿಚಾರಣೆ ನಡೆದು, ಖಾನ್‌ ನಿರ್ದೋಷಿ ಎಂದು ನ್ಯಾಯಾಧೀಶರು ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next