Advertisement

ಪಂಜಾಬ್‌ ಪೊಲೀಸರ ವಶದಿಂದ ಇಬ್ಬರು ವಿಚಾರಣಾಧೀನ ಕೈದಿಗಳು ಪರಾರಿ

03:14 PM May 19, 2017 | Team Udayavani |

ಜೈಪುರ : ರಾಜಸ್ಥಾನದ ನಾಗೋರ್‌ ಜಿಲ್ಲೆಯ ದಿದ್ವಾನಾ ಪಟ್ಟಣದಲ್ಲಿ ರಸ್ತೆ ಬದಿಯ ಹೊಟೇಲ್‌ನಲ್ಲಿ ಪಂಜಾಬ್‌ ಪೊಲೀಸರಿಗೆ ಚಳ್ಳೆ ತಿನ್ನಿಸಿ ಇಬ್ಬರು ವಿಚಾರಣಾಧೀನ ಕೈದಿಗಳು ಪೊಲೀಸರ ವಶದಿಂದ ತಪ್ಪಿಸಿಕೊಂಡಿರುವ ಘಟನೆ ವರದಿಯಾಗಿದೆ. 

Advertisement

ಪರಾರಿಯಾಗಿರುವ ವಿಚಾರಣಾಧೀನ ಕೈದಿಗಳೆಂದರೆ ಗುರ್ವೀಂದರ್‌ ಸಿಂಗ್‌ ಮತ್ತು ಜಸ್ಪಾಲ್‌ ಸಿಂಗ್‌. ಇವರನ್ನು ಅಮೃತಸರ ಸೆಂಟ್ರಲ್‌ ಜೈಲಿನಲ್ಲಿ ಇಡಲಾಗಿತ್ತು. ಪಂಜಾಬ್‌ ಪೊಲೀಸ್‌ನ ಮೂವರು ಸಿಬಂದಿಗಳನ್ನು ಇವರನ್ನು ಚಿತ್ತೂರ್‌ಗಢ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದೊಯ್ಯುತ್ತಿದ್ದರು. 

ರಸ್ತೆ ಬದಿಯ ಹೊಟೇಲೊಂದರಲ್ಲಿ ಊಟಕ್ಕೆಂದು ಇಳಿದಾಗ ವಿಚಾರಣಾಧೀನ ಕೈದಿಗಳು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾದರು. 

Advertisement

Udayavani is now on Telegram. Click here to join our channel and stay updated with the latest news.

Next