Advertisement

ಮಹಾರಾಷ್ಟ್ರದಲ್ಲಿ ಇಬ್ಬರು ನಕ್ಸಲರ ಬಂಧನ

06:50 PM Oct 08, 2022 | Team Udayavani |

ಮುಂಬೈ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲಾ ಪೊಲೀಸರು ಶುಕ್ರವಾರ ಇಬ್ಬರು ನಕ್ಸಲರನ್ನು ಬಂಧಿಸಿದ್ದಾರೆ.

Advertisement

ಈ ಇಬ್ಬರ ಸುಳಿವು ನೀಡಿದಲ್ಲಿ ಒಟ್ಟು 10 ಲಕ್ಷ ರೂ. ನಗದನ್ನು ಘೋಷಿಸಲಾಗಿತ್ತು. ಇಬ್ಬರೂ ಗಡ್ಚಿರೋಲಿ ಜಿಲ್ಲೆಯ ಧನೋರಾ ಗ್ರಾಮಕ್ಕೆ ಸೇರಿದ್ದಾರೆ.

ಈ ಪೈಕಿ ಶನಿರಾಮ್‌ ಅಲಿಯಾಸ್‌ ಶಂಕರ್‌ ತಲೆಯ ಮೇಲೆ 8 ಲಕ್ಷ ರೂ., ಸಮುರಾಮ್‌ ಅಲಿಯಾಸ್‌ ಸೂರ್ಯಘೇಸನ್‌ ನರೋಟೆ ತಲೆ ಮೇಲೆ 2 ಲಕ್ಷ ರೂ. ಘೋಷಿಸಲಾಗಿತ್ತು.

ಮಹಾರಾಷ್ಟ್ರದ ನಕ್ಸಲ್‌ ನಿಗ್ರಹ ಪಡೆ, ಇಬ್ಬರನ್ನೂ ಧನೋರಾದ ಸಾವರ್‌ಗಾಂವ್‌ ಪ್ರದೇಶದಲ್ಲಿ ಸೆರೆಹಿಡಿದಿದೆ. ಇಬ್ಬರ ಮೇಲೆ ಕೊಲೆ, ದರೋಡೆ, ಪೊಲೀಸರ ಮೇಲೆ ಗುಂಡು ಹಾರಿಸಿರುವುದು ಸೇರಿ ಹಲವು ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next