Advertisement

ಸಚಿವ ಸ್ಥಾನ ಸಿಗದ ಪಂಜಾಬ್‌ ಕೈ ಶಾಸಕರಿಬ್ಬರಿಂದ ಪಕ್ಷದ ಹುದ್ದೆ ತ್ಯಾಗ

07:28 PM Apr 21, 2018 | Team Udayavani |

ಚಂಡೀಗಢ : ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೆ ಸಚಿವ ಸ್ಥಾನ ಕೊಡದ ಕಾರಣಕ್ಕೆ ಆಸಮಾಧಾನಗೊಂಡ ಇಬ್ಬರು ಕಾಂಗ್ರೆಸ್‌ ಶಾಸಕರು ಪಕ್ಷದ ಪಂಜಾಬ್‌ ಘಟಕದಲ್ಲಿನ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ವಿದ್ಯಮಾನ ಇಂದು ಸಂಭವಿಸಿದೆ.

Advertisement

ಸಂಗ್ರೂರ್‌ ಜಿಲ್ಲೆಯ ಅಮರಗಢ ಶಾಸಕ ಸುರ್ಜಿತ್‌ ಸಿಂಗ್‌ ಧಿಮಾನ್‌ ಮತ್ತು ಫಾಜಿಲ್ಕಾದ ಬಲ್ಲುವಾನಾ ಕ್ಷೇತ್ರದ ಶಾಸಕ ನಾಥು ರಾಮ್‌ ಅವರು ಪಕ್ಷದಲ್ಲಿನ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದವರು. ಇವರಿಬ್ಬರೂ ತಮ್ಮ ತ್ಯಾಗಪತ್ರವನ್ನು ಪಂಜಾಬ್‌ ಪ್ರದೇಶ್‌ ಕಾಂಗ್ರೆಸ್‌ ಸಮಿತಿಯ ಮುಖ್ಯಸ್ಥ ಸುನೀಲ್‌ ಜಾಖಡ್‌ ಅವರಿಗೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next