Advertisement

ಹರಿಯಾಣ ಅಕ್ರಮ ಗಣಿಗಾರಿಕೆ: ಡಿಎಸ್ ಪಿ ಹತ್ಯೆಯ ಬಳಿಕ ಪೊಲೀಸರ ಮೇಲೆ ಮತ್ತೆ ದಾಳಿ

02:05 PM Sep 10, 2022 | Team Udayavani |

ನುಹ್‌ : ಹರಿಯಾಣದಲ್ಲಿ ಡಿಎಸ್ ಪಿ ಹತ್ಯೆಗೀಡಾದ ತಿಂಗಳ ನಂತರ, ಗಣಿಗಾರಿಕೆ ಮಾಫಿಯಾ ಶುಕ್ರವಾರ ಪೊಲೀಸ್ ಮತ್ತು ಸ್ಥಳೀಯ ಗಣಿಗಾರಿಕೆ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ಜಂಟಿ ತಂಡವನ್ನು ನುಹ್ ಜಿಲ್ಲೆಯ ಅಕ್ರಮ ಗಣಿಗಾರಿಕೆ ಸ್ಥಳದಲ್ಲಿ ದಾಳಿ ನಡೆಸಿ ಅಟ್ಟಹಾಸ ಮೆರೆದಿದೆ.

Advertisement

ಹರಿಯಾಣ, ಪೊಲೀಸರ ಪ್ರಕಾರ ನುಹ್‌ನ ಅಕ್ರಮ ಗಣಿಗಾರಿಕೆ ಸ್ಥಳದಲ್ಲಿ ಜಂಟಿ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳ ತಂಡವು ದಾಳಿ ನಡೆಸಿದೆ. ಗುರುತಿಸಲಾದ ಐವರು ಮತ್ತು ಸುಮಾರು 40 ರಿಂದ 50 ಮಂದಿ ಅಪರಿಚಿತ ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. 3 ಜೆಸಿಬಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಉಷಾ ಕುಂದು ತಿಳಿಸಿದ್ದಾರೆ.

ಜುಲೈ 19 ರಂದು ಡಿಎಸ್ ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರು ನುಹ್‌ನಲ್ಲಿ ಅಕ್ರಮ ಗಣಿಗಾರಿಕೆಯನ್ನು ತನಿಖೆ ನಡೆಸುತ್ತಿದ್ದ ಸ್ಥಳದಲ್ಲಿ ಟ್ರಕ್‌ನಿಂದ ಹೊಡೆದುರುಳಿಸಿದರು. ನುಹ್ ಡಿಎಸ್‌ಪಿ ಹತ್ಯೆಗೆ ಸಂಬಂಧಿಸಿದಂತೆ ಒಟ್ಟು ಒಂಬತ್ತು ಜನರನ್ನು ಬಂಧಿಸಲಾಗಿದೆ. ನುಹ್ ಡಿಎಸ್ಪಿ ಹತ್ಯೆಯ ಪ್ರಮುಖ ಆರೋಪಿ, ಹರಿಯಾಣದ ತೌರು ಮೂಲದ ಶಬೀರ್ ಅಲಿಯಾಸ್ ಮಿತ್ತರ್ ಎಂದು ಗುರುತಿಸಲಾಗಿದ್ದು, ಜುಲೈ 20 ರಂದು ಹರಿಯಾಣ ಪೊಲೀಸರೊಂದಿಗೆ ಎನ್‌ಕೌಂಟರ್ ನಡೆಸಿದ ನಂತರ ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next