Advertisement

Video: ಕಾಣಿಕೆ ಹುಂಡಿ ಎಗರಿಸಲು ಕುದುರೆ ಏರಿ ಬಂದ ಕಳ್ಳರು… ಮುಂದೇನಾಯ್ತು ನೀವೇ ನೋಡಿ

03:43 PM Dec 24, 2023 | Team Udayavani |

ಉತ್ತರ ಪ್ರದೇಶ: ದೇವಸ್ಥಾನವೊಂದರಲ್ಲಿ ಕಳ್ಳನೊಬ್ಬ ಕಾಣಿಕೆ ಡಬ್ಬವನ್ನು ಕದಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಇಲ್ಲಿ ನೆಟ್ಟಿಗರ ಗಮನ ಸೆಳೆದಿದ್ದು ಕುದುರೆ, ಆರೋಪಿ ಕಳ್ಳ ಮತ್ತು ಆತನ ಸಹಚರರು ಕಾಣಿಕೆ ಡಬ್ಬವನ್ನು ಕದಿಯಲು ಕುದುರೆಯ ಮೇಲೆ ಬಂದಿದ್ದಾರೆ. ಇದು ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ.

Advertisement

ಡಿಸೆಂಬರ್ 20 ರಂದು ಕಾನ್ಪುರದ ಬರ್ರಾ ಪ್ರದೇಶದಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ದೇವಸ್ಥಾನದೊಳಗೆ ಜಿಗಿಯುತ್ತಿರುವುದನ್ನು ಕಾಣಬಹುದು. ನಂತರ ದೇವಸ್ಥಾನದಿಂದ ಕಾಣಿಕೆಗಳ ಪೆಟ್ಟಿಗೆಯನ್ನು ತೆಗೆಯಲು ಪ್ರಯತ್ನಿಸುತ್ತಾನೆ.

ಈ ವೇಳೆ ಅಲ್ಲಿದ್ದ ಬೀದಿ ನಾಯಿಗಳು ಬೊಗಳಲು ಆರಂಭಿಸುತ್ತವೆ ಆದರೂ ಹೆದರದ ಕಳ್ಳ ಮತ್ತೆ ಕಾಣಿಕೆ ಡಬ್ಬ ಒಡೆಯಲು ಯತ್ನಿಸಿದ್ದಾನೆ ಅಷ್ಟೋತ್ತಿಗೆ ನಾಯಿ ಸದ್ದಿಗೆ ಎಚ್ಚರಗೊಂಡ ಅಲ್ಲಿನ ಸ್ಥಳೀಯ ಯುವಕರು ಕೂಡಲೇ ಮನೆಯಿಂದ ಹೊರಗೆ ಬಂದಿದ್ದಾರೆ ಅಷ್ಟೋತ್ತಿಗಾಗಲೇ ಕಳ್ಳರು ಕುದುರೆ ಮೇಲೇರಿ ಪರಾರಿಯಾಗಿದ್ದಾರೆ.

ಬೀದಿ ನಾಯಿಗಳಿಂದ ಕಳ್ಳತನ ವಿಫಲವಾಗಿ ದೇವಸ್ಥಾನದ ಕಾಣಿಕೆ ಹುಂಡಿ ಭದ್ರವಾಗಿ ಉಳಿದುಕೊಂಡಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next