Advertisement

ಉತ್ತರ ಪ್ರದೇಶ : ಕಾರು ಢಿಕ್ಕಿಯಾಗಿ ಇಬ್ಬರು ಕಾರ್ಮಿಕರ ಸಾವು

11:53 AM Aug 22, 2017 | Team Udayavani |

ಪ್ರತಾಪ್‌ ಗಢ, ಉತ್ತರ ಪ್ರದೇಶ: ಪ್ರತಾಪ್‌ ಗಢ – ಪತ್ತಿ ರಸ್ತೆಯಲ್ಲಿ ಶರವೇಗದಿಂದ ಧಾವಿಸುತ್ತಿದ್ದ ಕಾರೊಂದು ಇಬ್ಬರು ಕಾರ್ಮಿಕರಿಗೆ ಢಿಕ್ಕಿ ಹೊಡೆದು ಅವರನ್ನು ದಾರುಣವಾಗಿ ಬಲಿ ಪಡೆದ ದುರ್ಘ‌ಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಮೃತ ಕಾರ್ಮಿಕರನ್ನು ಕಲ್ಲು ರಾಮ್‌ 55 ಮತ್ತು ಪ್ರದೀಪ್‌ 40 ಎಂದು ಗುರುತಿಸಲಾಗಿದೆ. ಇವರು ಕೆಲಸ ಮುಗಿಸಿ ತಮ್ಮ ಸೈಕಲ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಕಂಧಾಯಿ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಕಾರು ಅವರ ಸೈಕಲಿಗೆ ಢಿಕ್ಕಿ ಹೊಡೆಯಿತು. 

ತೀವ್ರವಾಗಿ ಗಾಯಗೊಂಡ ಇವರನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಷ್ಟರೊಳಗಾಗಿಯೇ ಅವರ ಮೃತಪಟ್ಟಿರುವದಾಗಿ ವೈದ್ಯರು ಹೇಳಿದರು. ಇವರಿಗೆ ಢಿಕ್ಕಿ ಹೊಡೆದ ಕಾರು ನಿಲ್ಲದೆ ಪರಾರಿಯಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ಕಾರನ್ನು ಪತ್ತೆ ಹಚ್ಚುವ ಕಾರ್ಯ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next