Advertisement

ಅಲಿಗಡದಲ್ಲಿ ಮಾಧ್ಯಮದವರ ಮುಂದೆಯೇ ಎನ್‌ಕೌಂಟರ್‌

06:00 AM Sep 21, 2018 | Team Udayavani |

ಅಲಿಗಡ: ಉತ್ತರ ಪ್ರದೇಶದ ಅಲಿಗಡದಲ್ಲಿ ಮಾಧ್ಯಮದವರ ಎದುರೇ ಇಬ್ಬರು ಗುರುತರ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ಮುಸ್ತಾಕಿಂ ಮತ್ತು ನೌಶಾದ್‌ ಎಂಬ ಇಬ್ಬರು ವ್ಯಕ್ತಿಗಳ ಶೋಧ ಕಾರ್ಯ ನಡೆಸುತ್ತಿದ್ದೆವು. ಇಬ್ಬರೂ ಹಿಂದೂ ಧಾರ್ಮಿಕ ನಾಯಕರ ಹತ್ಯೆ ಸೇರಿಸಿ ಕನಿಷ್ಠ ಆರು ಪ್ರಕರಣಗಳಲ್ಲಿ ಬೇಕಾದವರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಯೋಗಿ ಆದಿತ್ಯನಾಥ್‌ ನೇತೃತ್ವದ ಸರಕಾರ ಸದ್ಯ ನಡೆಸುತ್ತಿರುವ ಎನ್‌ಕೌಂಟರ್‌ಗಳ ವಿರುದ್ಧ ಆಕ್ಷೇಪಗಳು ಕೇಳಿ ಬರುತ್ತಿರುವಂತೆಯೇ ಮಾಧ್ಯಮದವರನ್ನು ಕರೆಯಿಸಿಕೊಂಡು ಪೊಲೀಸರು ಎನ್‌ಕೌಂಟರ್‌ ನಡೆಸಿದ್ದಾರೆ.

Advertisement

“ಬೆಳಗ್ಗೆ 6.30ಕ್ಕೆ ಪೊಲೀಸ್‌ ಸಿಬಂದಿ ಎದುರೇ ಇಬ್ಬರು ಬೈಕ್‌ನಲ್ಲಿ ಹೋದರು. ಅವರನ್ನು ತಡೆಯಲು ಯತ್ನಿಸಿದಾಗ ಅವರು ನಮ್ಮತ್ತ ಗುಂಡು ಹಾರಿಸಿದರು. ಅವರನ್ನು ಅಟ್ಟಿಸಿಕೊಂಡು ಹೋದಾಗಲೂ ನಮ್ಮತ್ತ ಗುಂಡು ಹಾರಿಸಿದರು. ಪ್ರತಿಯಾಗಿ ಗುಂಡು ಹಾರಿಸಿದಾಗ ಅವರು ಗಾಯಗೊಂಡು ನೆಲಕ್ಕೆ ಬಿದ್ದರು. ಆಸ್ಪತ್ರೆಗೆ ದಾಖಲಿಸಿದಾಗ ಅಸುನೀಗಿದ್ದಾರೆ ಎಂದು ವೈದ್ಯರು ಪ್ರಕಟಿಸಿದರು’ ಎಂದು ಅಲಿಗಡ ಜಿಲ್ಲೆಯ ಎಸ್‌ಪಿ ಅಜಯ್‌ ಸಾಹಿ° ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next