Advertisement

ಮಾರಿ‌ಹಬ್ಬಕ್ಕೆ ನೆಂಟರನ್ನು ಕರೆಯಲು ಹೋದವರು ಅಪಘಾತದಲ್ಲಿ ಸಾವು

10:02 AM Feb 25, 2020 | sudhir |

ಲಕ್ಕವಳ್ಳಿ/ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆಯುತ್ತಿರುವ ಮಾರಿಹಬ್ಬಕ್ಕೆ ನೆಂಟರ ಕರೆಯಲು ಹೋದ ಯುವಕರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ಸೋಮವಾರ ಸಂಜೆ 5.30ರ ಸುಮಾರಿಗೆ ಲಕ್ಕವಳ್ಳಿ-ಬಿಆರ್ ಪಿ ಸಮೀಪದ ಹುಣಸವಳ್ಳಿಯಲ್ಲಿ ನಡೆದಿದೆ.

Advertisement

ಶಿವಮೊಗ್ಗದ ನವುಲೆಯ ಮೋಹನ್ ಹಾಗೂ ಕುಮಾರ್ ಸಾವನ್ನಪ್ಪಿದ ದುರ್ದೈವಿಗಳು. ಬೈಕ್ ನಲ್ಲಿ ತೆರಳುತ್ತಿದ್ದ ಇವರು ಎದುರಿಗೆ ಬರುತ್ತಿದ್ದ ಟಿಪ್ಪರ್ ಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

ಹುಣಸವಳ್ಳಿ ಸಮೀಪ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದು, ಹೆಲ್ಮೆಟ್ ಧರಿಸದ ಇವರು, ಪೊಲೀಸರಿಂದ ತಪ್ಪಿಸಿಕೊಳ್ಳಲೆತ್ನಿಸಿದಾಗ ಘಟನೆ ಸಂಭವಿಸಿದ್ದು, ಅಫಘಾತದಲ್ಲಿ ದೇಹದ ಅಂಗಾಂಗಗಳು ಛಿದ್ರವಾಗಿವೆ.

ಪೊಲೀಸರು ಹೆಲ್ಮೆಟ್ ತಪಾಸಣೆ ಮಾಡಲು ಬಂದಾಗ ದಂಡದ ಭೀತಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಇಂತಹ ಅಪಘಾತಗಳು ಪದೇ ಪದೇ ಸಂಭವಿಸುತ್ತಿವೆ. ಘಟನೆಗೆ ಪೊಲೀಸರೆ ಹೊಣೆ ಎಂದು ಸ್ಥಳೀಯರು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next