Advertisement

ಶಿರಾ ಸೀಮೆ ಸಾಂಸ್ಕೃತಿಕ ವೇದಿಕೆ : ಇಂದಿನಿಂದ 2 ದಿನದ ನಾಟಕೋತ್ಸವ

11:49 AM Dec 14, 2021 | Team Udayavani |

ಶಿರಾ : ಶಿರಾ ಸೀಮೆ ಸಾಂಸ್ಕೃತಿಕ ವೇದಿಕೆಯಿಂದ ಡಿ. 14 ರಿಂದ (ಇಂದಿನಿಂದ) ಎರಡು ದಿನದ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.

Advertisement

ನಗರದ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಡಿ. 14 ರಂದು ಮಂಗಳವಾರ ಸಂಜೆ 7.30ಕ್ಕೆ ರಾಜೇಂದ್ರ ಕಾರಂತರ ಹಾಸ್ಯ ನಾಟಕ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ರಂಗ ಪ್ರದರ್ಶನದ ಮೂಲಕ ನಾಟಕೋತ್ಸವ ಚಾಲನೆಯಾಗಲಿದೆ.

ಡಿ. 15 ಬುಧವಾರ ಸಂಜೆ 7.30ಕ್ಕೆ ಆದಿಕವಿ ಪಂಪನ ಆದಿಪುರಾಣ ಗ್ರಂಥದಿಂದ ಆಯ್ದ ಭಾಗ ‘ಬಾಹುಬಲಿ ವಿಜಯಂ’ ರಂಗ ಪ್ರದರ್ಶನ ನಡೆಯಲಿದೆ. ಬಳ್ಳಾರಿ ಜಿಲ್ಲೆ ಸಿರಿಗೇರಿಯ ‘ಧಾತ್ರಿ ರಂಗ ಯಾತ್ರೆ’ ತಂಡ ಪ್ರದರ್ಶಿಸುವ ಈ ಎರಡು ನಾಟಕಗಳಲ್ಲಿ ಪ್ರತಿಷ್ಠಿತ ನೀನಾಸಂ, ಸಾಣೆಹಳ್ಳಿ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದ ಕಲಾವಿದರು ಅಭಿನಯಿಸಲಿದ್ದಾರೆ.

ಈಗಾಗಲೇ ರಾಜ್ಯದ ಹಲವೆಡೆ ಪ್ರದರ್ಶನವಾಗಿರುವ ಈ ನಾಟಕಗಳು ಮನೋರಂಜನೆ ಜತೆಗೆ ಮನೋ ವಿಕಾಸಕ್ಕೆ ಪೂರಕವಾಗಿವೆ. ಎರಡು ಪ್ರದರ್ಶನಗಳು ಉಚಿತವಾಗಿದ್ದು ಪ್ರೇಕ್ಷಕರು ಿದರ ಲಾಭವನ್ನು ಪಡೆಯಬಹುದು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next