Advertisement

21kg ಗಾಂಜಾ ಸ್ವಾಹಾ ಮಾಡಿದ ಇಲಿಗಳು!; ಇಬ್ಬರು ಆರೋಪಿಗಳು ಖುಲಾಸೆ

02:39 PM Jul 05, 2023 | Team Udayavani |

ಚೆನ್ನೈ: 22 ಕಿಲೋಗ್ರಾಂಗಳಷ್ಟು ಗಾಂಜಾ ಹೊಂದಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಇಬ್ಬರು ಆರೋಪಿಗಳನ್ನು ಮಂಗಳವಾರ ನ್ಯಾಯಾಲಯ ಖುಲಾಸೆಗೊಳಿಸಿದೆ. ಇದಕ್ಕೆ ಮುಖ್ಯ ಕಾರಣವಾಗಿದ್ದು ಇಲಿಗಳು ಸಾಕ್ಷ್ಯವನ್ನು ತಿಂದುಹಾಕಿವೆ ಎಂದು ಪೊಲೀಸರು ತಿಳಿಸಿದ್ದು…!, ಹೌದು 2020 ರಲ್ಲಿ ಮರೀನಾ ಪೊಲೀಸರು ಆರೋಪಿಗಳಾದ ರಾಜಗೋಪಾಲ್ ಮತ್ತು ನಾಗೇಶ್ವರ ರಾವ್ ರನ್ನು ಚೆನ್ನೈನಲ್ಲಿ ಬಂಧಿಸಿದ್ದರು.ಅವರ ವಿರುದ್ಧ ತನಿಖೆ ಆರಂಭಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

Advertisement

ಪ್ರಕರಣವನ್ನು ವಿಶೇಷ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ನ್ಯಾಯಾಲಯವು ವಿಚಾರಣೆ ನಡೆಸಿದ್ದು, ಅಲ್ಲಿ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡ 50 ಗ್ರಾಂ ಗಾಂಜಾವನ್ನು ಸಲ್ಲಿಸಿದ್ದಾರೆ, ಮಾತ್ರವಲ್ಲದೆ 50 ಗ್ರಾಂ ಗಾಂಜಾವನ್ನುವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನುಳಿದ 21.9 ಕಿಲೋಗ್ರಾಂಗಳಷ್ಟು ಗಾಂಜಾ ಎಲ್ಲಿದೆ ಎಂದು ನ್ಯಾಯಾಲಯ ಕೇಳಿದಾಗ, ಅದನ್ನು ಇಲಿಗಳು ತಿಂದಿವೆ ಎಂದು ಪೊಲೀಸರು ಹೇಳಿದ್ದಾರೆ..!!. ಚಾರ್ಜ್ ಶೀಟ್‌ನಲ್ಲಿ ನಮೂದಿಸಲಾದ ಗಾಂಜಾವನ್ನು ಪೊಲೀಸರು ಸಲ್ಲಿಸಲು ಸಾಧ್ಯವಾಗದ ಕಾರಣ, ರಾಜಗೋಪಾಲ್ ಮತ್ತು ನಾಗೇಶ್ವರ ರಾವ್ ರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next