Advertisement

ಸಜ್ಜನ್‌ ಕುಮಾರ್‌ ಜಾಮೀನು ಅರ್ಜಿ ತಿರಸ್ಕೃತ

08:34 AM May 14, 2020 | Sriram |

ನವದೆಹಲಿ: ಸಿಖ್‌ ಗಲಭೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌ ಹಿರಿಯ ನಾಯಕ ಸಜ್ಜನ್‌ ಕುಮಾರ್‌ಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ಬುಧವಾರ ನಿರಾಕರಿಸಿದೆ.

Advertisement

“ದೆಹಲಿಯ ಏಮ್ಸ್‌ ಆಸ್ಪತ್ರೆಯ ವೈದ್ಯಕೀಯ ಮಂಡಳಿಯ ದಾಖಲೆ ಪ್ರಕಾರ, ನೀವು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಹೀಗಾಗಿ ಈಗ ಜಾಮೀನು ನೀಡುವುದಿಲ್ಲ, ಕ್ಷಮಿಸಿ. ಜುಲೈನಲ್ಲಿ ನಿಮ್ಮ ಅರ್ಜಿಯ ವಿಚಾರಣೆ ನಡೆಸುವುದಾಗಿ’ ನ್ಯಾಯಾಲಯ ತಿಳಿಸಿದೆ.

ಮಾಜಿ ಸಂಸದರೂ ಆಗಿರುವ ಸಜ್ಜನ್‌ ಕುಮಾರ್‌(74) ವೈದ್ಯಕೀಯ ಆಧಾರದ ಮೇರೆಗೆ ಜಾಮೀನು ನೀಡುವಂತೆ ಮನವಿ ಸಲ್ಲಿಸಿದ್ದರು. 2018ರ ಡಿಸೆಂಬರ್‌ನಿಂದ ಅವರು ಕಾರಾಗೃಹದಲ್ಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next