Advertisement

Plane Hijack: 1981ರಲ್ಲಿ ಶ್ರೀನಗರ ವಿಮಾನ ಅಪಹರಿಸಿದ್ದ ಉಗ್ರ ಪಾಕ್‌ನಲ್ಲಿ ಸಾವು

10:24 AM Jul 07, 2024 | Team Udayavani |

ಹೊಸದಿಲ್ಲಿ/ಜಲಂಧರ್‌: ಪಾಕಿಸ್ಥಾನದಲ್ಲಿ 4 ದಶಕ ಗಳಿಂದ ಅಡಗಿಕೊಂಡಿದ್ದ ಖಲಿಸ್ಥಾನ ಉಗ್ರ ಗಜಿಂದರ್‌ ಸಿಂಗ್‌ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

Advertisement

1981ರಲ್ಲಿ ಹೊಸದಿಲ್ಲಿ- ಶ್ರೀನಗರ ವಿಮಾನವನ್ನು ಈತ, 4 ಉಗ್ರರೊಂದಿಗೆ ಹೈಜಾಕ್‌ ಮಾಡಿದ್ದ. ಭಾರತ ದಲ್ಲಿ ಬಂಧಿಯಾಗಿದ್ದ ಖಲಿಸ್ತಾನ ಉಗ್ರರನ್ನು ಬಿಡುಗಡೆಗೊಳಿಸಲು ಹಾಗೂ 4 ಕೋಟಿ ರೂ. ನೀಡಲು ಹೈಜಾಕ್‌ ಮೂಲಕ ಬೇಡಿಕೆ ಇಟ್ಟಿದ್ದ. ಬಳಿಕ ಪಾಕಿಸ್ಥಾನ ಪೊಲೀಸರು ಭಯೋತ್ಪಾದಕರನ್ನು ಬಂಧಿಸಿದ್ದರು ಎನ್ನಲಾಗಿದೆ.
ಅವನನ್ನು ಭಾರತಕ್ಕೆ ಒಪ್ಪಿಸುವಂತೆ ಪಾಕಿಸ್ಥಾನಕ್ಕೆ ಸೂಚಿಸಿದರೂ ಸಹ, ಗಜಿಂದರ್‌ ನಮ್ಮ ದೇಶದಲ್ಲಿಲ್ಲ ಎಂದು ಪಾಕ್‌ ಸುಳ್ಳು ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next