Advertisement

ತವರು ಜಿಲ್ಲೆಗೆ ತೆರಳಿದ 198 ಜನರು

12:44 PM May 05, 2020 | Suhan S |

ಹುಬ್ಬಳ್ಳಿ: ಜಿಲ್ಲೆಯಲ್ಲಿ ಉಳಿದುಕೊಂಡಿದ್ದ ರಾಜ್ಯದ ವಿವಿಧ ಜಿಲ್ಲೆಗಳ ವಲಸೆ ಕಾರ್ಮಿಕರು, ಪ್ರವಾಸಿಗರು, ಯಾತ್ರಿಗಳು ಹಾಗೂ ವಿದ್ಯಾರ್ಥಿಗಳನ್ನು ಜಿಲ್ಲಾಡಳತದ ವತಿಯಿಂದ ವಿಶೇಷ ಬಸ್‌ಗಳ ಮೂಲಕ 198 ಜನರನ್ನು ಅವರ ತವರು ಜಿಲ್ಲೆಗೆ ಕಳುಹಿಸಲಾಯಿತು.

Advertisement

ಆನ್‌ಲೈನ್‌ ನೋಂದಣಿ ಮಾಡಲು ಕೆಲವರಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಲ್ಲಿ ಸ್ಥಳದಲ್ಲಿಯೇ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೀಗಾಗಿ ನೇರವಾಗಿ ಬಸ್‌ ನಿಲ್ದಾಣಕ್ಕೆ ಆಗಮಿಸಿದವರ ಸಂಪೂರ್ಣ ಮಾಹಿತಿ ಪಡೆದು ಆರೋಗ್ಯ ತಪಾಸಣೆ ಮಾಡಲಾಯಿತು. ನಂತರ ಅವರು ತೆರಳಬೇಕಾದ ಜಿಲ್ಲೆಗಳ ಬಸ್‌ ಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಸಂಜೆಯ ವೇಳೆಗೆ ಏಳು ಬಸ್‌ಗಳ ಮೂಲಕ ಒಟ್ಟು 198 ಜನರು ಬೆಂಗಳೂರು, ಕಲಬುರಗಿ, ಬೀದರ, ಅಫಜಲಪುರ, ಮಂಗಳೂರು, ರಾಯಚೂರು ಜಿಲ್ಲೆಗಳಿಗೆ ವಿಶೇಷ ಬಸ್‌ಗಳ ಮೂಲಕ ತೆರಳಿದರು.

ಜಿಲ್ಲೆಯಿಂದ ವಿವಿಧ ಜಿಲ್ಲೆಗಳಿಗೆ ತೆರಳಿದ ಪ್ರತಿಯೊಬ್ಬ ಪ್ರಯಾಣಿಕರ ಆರೋಗ್ಯ ಮಾಹಿತಿ, ಅವರ ಸಂಪೂರ್ಣ ವಿವರಗಳನ್ನು ಅವರು ಪ್ರಯಾಣಿಸುತ್ತಿರುವ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಿವರಗಳನ್ನು ಕಳುಹಿಸಲಾಯಿತು.

ಉಪವಿಭಾಗಾಧಿಕಾರಿ ಮಹ್ಮದ್‌ ಜುಬೇರ್‌, ತಹಶೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳಾದ ಎಚ್‌. ರಾಮನಗೌಡರ, ಅಶೋಕ ಪಾಟೀಲ ಇನ್ನಿತರರು ಹೊರ ಜಿಲ್ಲೆಗಳ ಪ್ರಯಾಣಿಕರನ್ನು ಕಳುಹಿಸುವ ಕಾರ್ಯದಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next