Advertisement

ರಾಜ್ಯದಲ್ಲಿಂದು 1886 ಕೋವಿಡ್‌ ಸೋಂಕು ದೃಢ: 10509ಕ್ಕೇರಿದ ಸಕ್ರಿಯ ಪ್ರಕರಣ

09:04 PM Jul 30, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶನಿವಾರ 1886 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಬಳ್ಳಾರಿಯ ಕೋವಿಡ್‌ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣ 10509ಕ್ಕೆ ಏರಿಕೆಯಾಗಿದೆ.

Advertisement

32,273 ಮಂದಿಯ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಶೇ. 5.82 ಮಂದಿಯಲ್ಲಿ ಸೋಂಕು ದೃಢವಾಗಿದೆ. 1242 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಬೆಂಗಳೂರು ನಗರ 1342, ಬೆಂಗಳೂರು ಗ್ರಾಮಾಂತರ 60, ಮೈಸೂರು 58, ಧಾರವಾಡ, ಹಾಸನ 40 ಬೆಳಗಾವಿ 34, ಕೊಡಗು 32, ಕಲಬುರಗಿ 30, ತುಮಕೂರು 29 ಬಳ್ಳಾರಿ 28, ಕೋಲಾರ 21, ಮಂಡ್ಯ 19, ಉತ್ತರಕನ್ನಡ 17, ಉಡುಪಿ, ಚಿಕ್ಕಮಗಳೂರು 15, ಚಾಮರಾಜನಗರ 14, ದಕ್ಷಿಣಕನ್ನಡ, ರಾಯಚೂರು 13,ಶಿವಮೊಗ್ಗ 12, ಬೀದರ್‌ 11, ಬಾಗಲಕೋಟೆ, ದಾವಣಗೆರೆ 8, ಹಾವೇರಿ,ಕೊಪ್ಪಳ, ಗದಗ 5, ಚಿಕ್ಕಬಳ್ಳಾಪುರ, ವಿಜಯಪುರ, ಚಿತ್ರದುರ್ಗ, ರಾಮನಗರ 3, ಯಾದಗಿರಿ ಜಿಲ್ಲೆಯಲ್ಲಿ ಒಂದು ಪಾಸಿಟಿವ್‌ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next