Advertisement

ಮೊಬೈಲ್ ಖರೀದಿಸಲು ಹಣ ಕೊಡದಿದ್ದಕ್ಕೆ ಅಜ್ಜಿಯ ಕುತ್ತಿಗೆ ಹಿಸುಕಿ ಕೊಂದ ಮೊಮ್ಮಗ!

01:59 PM Apr 18, 2021 | Team Udayavani |

ಅಲಿಗಡ್ (ಉತ್ತರ ಪ್ರದೇಶ) : ಆ್ಯಂಡ್ರಾಯ್ಸ್ ಮೊಬೈಲ್ ಖರೀದಿಸಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ 18 ವರ್ಷದ ಹುಡುಗನೊಬ್ಬ ತನ್ನ ಅಜ್ಜಿಯ ಕುತ್ತಿಗೆಯನ್ನೇ ಹಿಸುಕಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಅನಾಹುತಕಾರಿ ಘಟನೆ ಉತ್ತರ ಪ್ರದೇಶದ ಅಲಿಗಡ್ ನಲ್ಲಿ ನಡೆದಿದ್ದು, ಆರೋಪಿಯನ್ನು ಸಚಿನ್ ಎಂದು ಗುರುತಿಸಲಾಗಿದೆ.

Advertisement

ಮೃತ ವೃದ್ಧೆಯನ್ನು ಮುನ್ನಿ ದೇವಿ ಎಂದು ಗುರುತಿಸಲಾಗಿದೆ. ಅಜ್ಜಿಯು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸಚಿನ್ ಹೇಳಿದ್ದ. ಈ ಕಾರಣದಿಂದಾಗಿ ಏಪ್ರಿಲ್ 2 ರಂದು ನಡೆದಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಇನ್ನು ಏಪ್ರಿಲ್ 2ರ ನಂತರದ ದಿನದಲ್ಲಿ ಮುನ್ನಿ ದೇವಿಯ ಅಂತ್ಯಕ್ರಿಯೆಯನ್ನು ಮಾಡಲಾಗಿದೆ.

ಇನ್ನು ಸಚಿನ್ ಚಿಕ್ಕಪ್ಪನಿಗೆ ತನ್ನ ತಾಯಿ ಸಾವಿನ ಹಿಂದಿರುವ ಹುನ್ನಾರ ಗೊತ್ತಾದ ಮೇಲೆ ಈ ಸುದ್ದಿ ಬೆಳಕಿಗೆ ಬಂದಿದೆ. ನಂತರ ಸಚಿನ್ ಚಿಕ್ಕಪ್ಪ ಸಚಿನ್ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಸಚಿನ್ ಸ್ನೇಹಿತರಾದ ಜಾಕಿ ಮತ್ತು ಹನಿ ಕೂಡ ಭಾಗಿಯಾಗಿದ್ದು ಈ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

ವಿಚಾರಣೆ ವೇಳೆ ಬಾಯಿ ಬಿಟ್ಟಿರುವ ಜಾಕಿ ಮತ್ತು ಸಚಿನ್, ಸಚಿನ್ ಆ್ಯಂಡ್ರಾಯ್ಡ್ ಮೊಬೈಲ್ ಕೊಳ್ಳಲು ಅಜ್ಜಿಯ ಬಳಿ ಹಣ ಕೇಳಿದ. ಆದ್ರೆ ಅಜ್ಜಿಯು ಹಣ ಕೊಡಲು ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ಸಚಿನ್ ಅಜ್ಜಿಯ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಅಜ್ಜಿಯನ್ನು ಸಮಾಧಾನ ಮಾಡಲು ಸಚಿನ್ ಮುಂದಾಗಿದ್ದಾನೆ. ಆದ್ರೆ ಆ ವೇಳೆ ಅಜ್ಜಿ ಮತ್ತು ಮೊಮ್ಮಗನ ನಡುವೆ ಖಾರವಾದ ವಾಗ್ವಾದ ನಡೆದು ಆರೋಪಿ ಸಚಿನ್ ಅಜ್ಜಿಯನ್ನು ಕೊಲೆ ಮಾಡಿದ್ದಾನೆ ಎಂದು ಅತ್ರೌಲಿ ಪೊಲೀಸ್ ಠಾಣೆಯ ಸಂಜಯ್ ಜೈಸ್ವಾಲ್ ತಿಳಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next