Advertisement

ಚಿಕ್ಕಬಳ್ಳಾಪುರದಲ್ಲಿಂದು ನಗರಸಭೆ ಆಯುಕ್ತ ಸೇರಿ 19 ಮಂದಿಗೆ ಸೋಂಕು ದೃಢ: ಇಬ್ಬರು ಸಾವು

07:38 PM Jul 10, 2020 | keerthan |

ಚಿಕ್ಕಬಳ್ಳಾಪುರ: ಕೋವಿಡ್ -19 ಮಹಾಮಾರಿ ಅರ್ಭಟ ಜಿಲ್ಲೆಯಲ್ಲಿ ಮುಂದುವರೆದಿದ್ದು ಶುಕ್ರವಾರ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಸೇರಿ ಒಟ್ಟು 19 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

Advertisement

ಜಿಲ್ಲೆಯಲ್ಲಿ 19 ಹೊಸ ಪ್ರಕರಣಗಳು ಸೇರಿ ಒಟ್ಟು ಇದುವರೆಗೂ ಬರೋಬ್ಬರಿ 351 ಮಂದಿ ಸೋಂಕಿತರು ಪತ್ತೆಯಾಗಿದ್ದು ಹೊಸದಾಗಿ ಕಂಡು ಬಂದಿರುವ 19 ಪ್ರಕರಣಗಳ ಪೈಕಿ ಚಿಕ್ಕಬಳ್ಳಾಪುರದಲ್ಲಿ 9, ಬಾಗೇಪಲ್ಲಿ, ಚಿಂತಾಮಣಿಯಲ್ಲಿ ತಲಾ 2 ಹಾಗೂ ಶಿಡ್ಲಘಟ್ಟ 4 ಹಾಗೂ ಗೌರಿಬಿದನೂರು, ಗುಡಿಬಂಡೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.

ಸಾವಿನ ಸಂಖ್ಯೆ 12ಕ್ಕೆ ಏರಿಕೆ:  ಇದರ ಮಧ್ಯೆ ಜಿಲ್ಲೆಯಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ ಏರುತ್ತಲೇ ಇದ್ದು ಶುಕ್ರವಾರ ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ ತಲಾ ಒಬ್ಬರು ಕೋವಿಡ್-19ಗೆ ಬಲಿಯಾಗಿರುವುದರಿಂದ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ. ಸಾವಿನ ಪ್ರಕರಣಗಳಲ್ಲಿ ಚಿಕ್ಕಬಳ್ಳಾಪುರ ಮೊದಲ ಸ್ಥಾನದಲ್ಲಿದೆ. ಚಿಕ್ಕಬಳ್ಳಾಪುರದಲ್ಲಿ ಒಟ್ಟು 6 ಮಂದಿ ಇದುವರೆಗೂ ಕೋವಿಡ್-19 ಬಲಿಯಾಗಿದ್ದರೆ ಉಳಿದಂತೆ ಶಿಡ್ಲಘಟ್ಟ 1, ಗೌರಿಬಿದನೂರು 4, ಚಿಂತಾಮಣಿ 1 ದಾಖಲಾಗಿದೆ.

ಒಟ್ಟು 351 ಮಂದಿ ಸೋಂಕಿತರ ಪೈಕಿ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 218 ಮಂದಿ ಮಾತ್ರ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರೆ 12 ಮಂದಿ ಕೋವಿಡ್‌ಗೆ, 1 ಕೋವಿಡ್ ಅಲ್ಲದ ಅನ್ಯ ಕಾರಣಕ್ಕೆ ಮೃತ ಪಟ್ಟಿದ್ದಾರೆ. ಉಳಿದಂತೆ 120 ಸಕ್ರಿಯ ಪ್ರಕರಣಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next