Advertisement

1733.95 ಕೋಟಿ ರೂ. ಪೂರಕ ಅಂದಾಜು ಸೇರ್ಪಡೆ

12:34 PM Jun 15, 2017 | |

ವಿಧಾನಸಭೆ: ಪ್ರಸಕ್ತ ಸಾಲಿನ (2017-18) ಬಜೆಟ್‌ನಲ್ಲಿ ಹೆಚ್ಚುವರಿ ವೆಚ್ಚದ ಅವಶ್ಯಕತೆಗಾಗಿ ಮೊದಲನೇ ಕಂತಿನಲ್ಲಿ 1733.95 ಕೋಟಿ ರೂ. ಪೂರಕ ಅಂದಾಜು ಸೇರ್ಪಡೆಯಾಗಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಪೂರಕ ಅಂದಾಜು ಮಂಡಿಸಿದ್ದು, 1733.95 ಕೋಟಿ ರೂ.ಗಳ ಪೈಕಿ ಹೈಕೋರ್ಟ್‌ ನ್ಯಾಯಾಧೀಶರ ವೈದ್ಯಕೀಯ ವೆಚ್ಚ ಮರುಪಾವತಿಗೆ 4.47 ಕೋಟಿ ರೂ., ಉಪ ಲೋಕಾಯುಕ್ತರ ಕಟ್ಟಡ ವೆಚ್ಚಕ್ಕೆ 12 ಲಕ್ಷ ರೂ., ಅರ್ಚಕರ ಮಾಸಿಕ ಸಂಭಾವನೆ ಹೆಚ್ಚಳದ ಹಿನ್ನೆಲೆಯಲ್ಲಿ 33.25 ಕೋಟಿ ರೂ. ಒದಗಿಸುವುದು ಸೇರಿದೆ.

ಅದೇ ರೀತಿ ಸದ್ಗುರು ರಾಯಲಿಂಗೇಶ್ವರ ಸಂಸ್ಥಾನ ಮಠಕ್ಕೆಯಾತ್ರಿ ನಿವಾಸ ನಿರ್ಮಿಸಲು 1 ಕೋಟಿ ರೂ., ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆಗೆ 41.12 ಲಕ್ಷ ರೂ., ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಆಕ್ಕ ಮಹಾದೇವಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡುವ ಕಾರ್ಯಕ್ರಮಕ್ಕೆ 3.10 ಕೋಟಿ ರೂ., ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಸ್ಥಾಪಿಸಲು 2 ಕೋಟಿ ರೂ., ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯಲ್ಲಿ ಪ್ರೊ.ಎಂ.ಎನ್‌.ಶ್ರೀನಿವಾಸ್‌ ಅಧ್ಯಯನ
ಪೀಠ ಸ್ಥಾಪನೆಗೆ 2 ಕೋಟಿ ರೂ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ವೇತನ ಹಾಗೂ ಸಿಬ್ಬಂದಿ ಭತ್ಯೆಗೆ 85
ಲಕ್ಷ ರೂ. ಹೆಚ್ಚುವರಿಯಾಗಿ ಒದಗಿಸಲು ಪ್ರಸ್ತಾಪಿಸಲಾಗಿದೆ.

ಬೆಂಗಳೂರಿನ ಕೊಳಗೇರಿ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಹಾಗೂ ಕೊಳಗೇರಿಗಳ ಬಾಕಿ ಶುಲ್ಕ ಪಾವತಿಗಾಗಿ 23.71 ಕೋಟಿ ರೂ., ವಿಜಯಪುರ, ಕೋಲಾರ ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು 20 ಕೋಟಿ ರೂ., ಮೈಸೂರು ಜಯದೇವ ಹೃದ್ರೋಗ ಕೇಂದ್ರ ಸ್ಥಾಪಿಸಲು 20 ಕೋಟಿ ರೂ., ಬೆಂಗಳೂರಿನ ನಿಮ್ಹಾನ್ಸ್‌ ಸಂಸ್ಥೆಯ ನಿರ್ವಹಣೆ ಮತ್ತು ಆಡಳಿತಾತ್ಮಕ ವೆಚ್ಚಕ್ಕೆ 20 ಕೋಟಿ ರೂ. ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next