Advertisement

Ujjwala: ಉಜ್ವಲ 2ನೇ ಹಂತಕ್ಕೆ 1,650 ಕೋಟಿ ರೂ.: ಪ್ರಧಾನಿ ನೇತೃತ್ವದ ಸಂಪುಟ ಸಭೆ ನಿರ್ಧಾರ

01:28 AM Sep 14, 2023 | Team Udayavani |

ಹೊಸದಿಲ್ಲಿ:  ಕೇಂದ್ರ ಸರಕಾರದ ಮಹತ್ವಾ ಕಾಂಕ್ಷಿ ಯೋಜನೆ ಉಜ್ವಲದ ವಿಸ್ತರಣೆಗೆ ನಿರ್ಧರಿಸಲಾಗಿದ್ದು, ಇನ್ನೂ 75 ಲಕ್ಷ ಮಂದಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಲು ಮುಂದಾಗಿದೆ.  ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.

Advertisement

ಬುಧವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. 2ನೇ ಹಂತದ ಪ್ರಧಾನಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ)ಗಾಗಿ 1,650 ಕೋ. ರೂ. ಅನುದಾನ ನೀಡಲು ತೀರ್ಮಾನಿಸಲಾಗಿದೆ. ಈ ಹಣವನ್ನು ಮುಂದಿನ 3 ವರ್ಷಗಳ ವರೆಗೆ ಬಳಸಬಹುದಾಗಿದೆ.

ಈಗಿರುವ ನಿಯಮಾವಳಿಗಳಂತೆಯೇ ಉಜ್ವಲ ಫ‌ಲಾನುಭವಿಗಳಿಗೆ ಉಚಿತವಾಗಿ ಒಂದು ಸಿಲಿಂಡರ್‌ ಮತ್ತು ಸ್ಟೌ  ನೀಡಲಾಗುತ್ತದೆ ಎಂದು ಸಂಪುಟ ಸಭೆ ಬಳಿಕ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಅಲ್ಲದೆ, ಯೋಜನೆಯ ಫ‌ಲಾನುಭವಿಗಳಿಗೆ ವರ್ಷಕ್ಕೆ 200 ರೂ. ಸಬ್ಸಿಡಿ ಸಹಿತವಾಗಿ 12 ಸಿಲಿಂಡರ್‌ಗಳನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಈಗ 75 ಲಕ್ಷ ಫ‌ಲಾನುಭವಿಗಳು ಸೇರ್ಪಡೆಯಾದರೆ, ಒಟ್ಟಾರೆಯಾಗಿ 10.35 ಕೋಟಿ ಮಂದಿ ಇದರ ಪ್ರಯೋಜನ ಪಡೆದಂತಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next