Advertisement

4 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ: ರಾಜ್ಯದಲ್ಲಿ ತಗ್ಗಿದ ಕೋವಿಡ್ ಮಹಾಮಾರಿ

07:56 PM Jul 26, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಇಂದು 1606 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಪಾಸಿಟಿವಿಟಿ ದರ ಶೇಕಡ 1.40 ರಷ್ಟು ಇದೆ.

Advertisement

ರಾಜ್ಯದಲ್ಲಿಂದು 1937 ಜನ ಸೋಂಕಿನಿಂದ ಗುಣಮುಖರರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 23,057 ಸಕ್ರಿಯ ಪ್ರಕರಣಗಳು ಇದ್ದು, ಇವತ್ತು 1,14,072 ಪರೀಕ್ಷೆ ನಡೆಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 467 ಜನರಿಗೆ ಸೋಂಕು ತಗುಲಿದೆ. 497 ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಮೂವರು ಸೇರಿದಂತೆ ರಾಜ್ಯದಲ್ಲಿ ಇಂದು 31 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-0, ಬಳ್ಳಾರಿ-0, ಬೆಳಗಾವಿ-69, ಬೆಂಗಳೂರು ಗ್ರಾಮಾಂತರ-17, ಬೆಂಗಳೂರು ನಗರ-467, ಬೀದರ್-0, ಚಾಮರಾಜನಗರ-54, ಚಿಕ್ಕಬಳ್ಳಾಪುರ-7, ಚಿಕ್ಕಮಗಳೂರು-38, ಚಿತ್ರದುರ್ಗ-36, ದಕ್ಷಿಣ ಕನ್ನಡ-357, ದಾವಣಗೆರೆ-11, ಧಾರವಾಡ-8, ಗದಗ-10, ಹಾಸನ-57, ಹಾವೇರಿ-2, ಕಲಬುರಗಿ-0, ಕೊಡಗು-19,ಕೋಲಾರ-28, ಕೊಪ್ಪಳ-0, ಮಂಡ್ಯ-40, ಮೈಸೂರು-162, ರಾಯಚೂರು-2, ರಾಮನಗರ-3, ಶಿವಮೊಗ್ಗ-52, ತುಮಕೂರು-59, ಉಡುಪಿ-78, ಉತ್ತರ ಕನ್ನಡ-19, ವಿಜಯಪುರ-9, ಯಾದಗಿರಿ-2.

Advertisement
Advertisement

Udayavani is now on Telegram. Click here to join our channel and stay updated with the latest news.

Next