Advertisement

ಗಾಂಜಾ ಬೆಳೆದ ಅರೋಪಿಗೆ 15 ವರ್ಷ ಕಠಿಣ ಶಿಕ್ಷೆ

03:20 PM Feb 07, 2023 | Team Udayavani |

ಗದಗ: ತನ್ನ ಸ್ವಂತ ಜಮೀನಿನಲ್ಲಿ ಗಾಂಜಾ ಬೆಳೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಉಡಚಪ್ಪ ಬಸವಣ್ಣೆಪ್ಪ ಪುರದ ಎಂಬ ವ್ಯಕ್ತಿಗೆ ಗದಗ ಜಿಲ್ಲಾ ಸತ್ರ ನ್ಯಾಯಾಲಯ 15 ವರ್ಷ ಕಠಿಣ ಶಿಕ್ಷೆ ಜೊತೆಗೆ 2 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ.

Advertisement

ನ. 9, 2013ರಂದು ಅಂದಿನ ಪ್ರೊಬೆಷನರಿ ಡಿವೈಎಸ್​ಪಿ ಆಗಿದ್ದ ಬಿ.ಎಸ್​. ನೇಮಗೌಡ (ಇಂದಿನ ಎಸ್ಪಿ) ನೇತೃತ್ವದಲ್ಲಿ ಉಡಚಪ್ಪನ ಹೊಲದಲ್ಲಿ ದಾಳಿ ಮಾಡಿ ಅಂದಾಜು 101 ಕೆಜಿ ಗಾಂಜಾ ಸ್ವತ್ತು ವಶಪಡಿಸಿಕೊಳ್ಳಲಾಗಿತ್ತು. ಹತ್ತಿ ಮತ್ತು ತೊಗರಿ ಬೆಳೆಯ ನಡುವೆ ಉಡಚಪ್ಪ ಗಾಂಜಾ ಬೆಳೆದಿದ್ದನು.

ಇದನ್ನೂ ಓದಿ:ಕುಮಾರಸ್ವಾಮಿಯದ್ದು ಮನೆ-ಊರು ದಾಟಿದ ಸಾಮರ್ಥ್ಯ: ಸಿ.ಟಿ.ರವಿ ಟಾಂಗ್

ಅಂದಾಜು 1 ಲಕ್ಷ ರೂ. ಮೌಲ್ಯದ ಗಾಂಜಾ ಇದಾಗಿತ್ತು. ಎನ್​ಡಿಪಿಎಸ್​ ಪ್ರಕರಣ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪಿಎಸ್​ಐ ಆರ್​.ಎಸ್​. ಕಟ್ಟಿಮನಿ ತನಿಖೆ ನಡೆಸಿ ಏಪ್ರಿಲ್​ 30, 2014ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಆರೋಪ ಸಾಭಿತಾದ ಹಿನ್ನೆಲೆಯಲ್ಲಿ ಜಿಲ್ಲಾ ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next