Advertisement

ತಪ್ಪಿದ ಭಾರೀ ದುರಂತ: ಬಸ್ ನಲ್ಲಿದ್ದ 15 ಕೆ.ಜಿ ಸ್ಪೋಟಕ ವಶ

09:59 AM Oct 02, 2019 | Mithun PG |

ಜಮ್ಮು-ಕಾಶ್ಮೀರ: ಬಸ್ ನಲ್ಲಿದ್ದ  15 ಕೆ.ಜಿ ಭಾರೀ ಸ್ಪೋಟಕಗಳನ್ನು ವಶಪಡಿಸಿಕೊಳ್ಳುವ ಮೂಲಕ ಭದ್ರತಾ ಪಡೆಗಳು ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದಾರೆ.

Advertisement

ಕಥುವಾ ಜಿಲ್ಲೆಯ ಬಿಲಾವರ್ ನಿಂದ ಜಮ್ಮು ನಗರಕ್ಕೆ ಬಂದಿರುವ ಬಸ್ ನಲ್ಲಿ ಈ ಭಾರೀ ಸ್ಪೋಟಕಗಳು ಪತ್ತೆಯಾಗಿದ್ದವು.  ಬೆಳಗ್ಗೆಯಷ್ಟೆ ಕೆರಾನ್ ಸೆಕ್ಟರ್ ನಲ್ಲಿ ಪಾಕಿಸ್ಥಾನ ಕದನ ವಿರಾಮ ಉಲ್ಲಂಘಿಸಿ ನಿರಂತರ ಗುಂಡಿನ ಮಳೆಗೆರೆದಿತ್ತು.  ಉಗ್ರರು ಬಸ್ ನಿಲ್ದಾಣದಲ್ಲಿ ಭಾರೀ ಪ್ರಮಾಣದಲ್ಲಿ ಭಯೋತ್ಪಾದನ ದಾಳಿ ನಡೆಸುವ ಹುನ್ನಾರ ಇದೀಗ ವಿಫಲಗೊಂಡಿದೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಭಾರತದಲ್ಲಿ ಭೀಕರ ದಾಳಿಗೆ ಸಂಚು ರೂಪಿಸುತ್ತಿರುವ ಉಗ್ರರು ಜನನಿಬಿಡ ಪ್ರದೇಶದತ್ತ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿದ್ದಾರೆ.

ಈ ಹಿಂದೆ ಬಿಲಾವರ್ ಮನೆಯೊಂದರಲ್ಲಿ 40 ಕೇಜಿಯಷ್ಟು  ಗನ್ ಪೌಡರ್ ಅನ್ನು ಸೇನೆ ವಶಪಡಿಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next