Advertisement

ಅವಳಿ ನಗರದ ನಿವಾಸಿಗಳಲ್ಲಿ 15 ದಿನ ಡೆಂಘೀ ಜಾಗೃತಿ

12:31 PM Jul 26, 2017 | |

ಹುಬ್ಬಳ್ಳಿ: ಡೆಂಘೀ ತಡೆಯುವ ದಿಸೆಯಲ್ಲಿ 15 ದಿನಗಳ ಕಾಲ ಅವಳಿ ನಗರದ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು. ಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

Advertisement

ವಲಯ ಕಚೇರಿ ಸಹಾಯಕ ಆಯುಕ್ತರು ವಾರ್ಡ್‌ ಸದಸ್ಯರ ಸಹಕಾರ ಪಡೆದುಕೊಂಡು ವಾರ್ಡ್‌ಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಜಾಗೃತಿ ಸಭೆಗಳನ್ನು ಆಯೋಜಿಸಬೇಕು ಎಂದರು. ಡೆಂಘೀ ಕುರಿತು ಜಾಗೃತಿ ಮೂಡಿಸಲು ಕಸ ಸಂಗ್ರಹ ವಾಹನಗಳಲ್ಲಿ ಆರೋಗ್ಯ ಇಲಾಖೆ ಮಾಡಿದ ಧ್ವನಿಸುರಳಿ ಪ್ರಸಾರ ಮಾಡಲಾಗುವುದು.

ಅಲ್ಲದೇ ಕೆಎಲ್‌ಇ ಎಫ್ ಎಂನಲ್ಲಿ ಡೆಂಘೀ ಮುನ್ನೆಚರಿಕೆ, ಚಿಕಿತ್ಸೆ ಕುರಿತು ಪ್ರಸಾರ ಮಾಡುವಂತೆ ಕೋರಲಾಗುವುದು  ಎಂದು ತಿಳಿಸಿದರು. ಮಹಾಪೌರ ಡಿ.ಕೆ. ಚವ್ಹಾಣ ಮಾತನಾಡಿ, ಡೆಂಘೀ ಕುರಿತು ಕರಪತ್ರಗಳನ್ನು ಪ್ರಕಟಿಸಿ ಜನರಿಗೆ ಹಂಚಬೇಕು. ಸದ್ಯ ನಗರದಲ್ಲಿ ಕೇವಲ 8 ಫಾಗಿಂಗ್‌ ಯಂತ್ರಗಳಿದ್ದು, ಅವುಗಳ ಸಂಖ್ಯೆಯನ್ನು 20ಕ್ಕೆ ಹೆಚ್ಚಿಸಬೇಕು.

ಡೆಂಘೀ ರೋಗಿಗಳ ಕುರಿತು ಖಾಸಗಿ ಸೇರಿದಂತೆ ಎಲ್ಲ ಆಸ್ಪತ್ರೆಗಳ ವರದಿ ತರಿಸಿಕೊಳ್ಳಬೇಕು ಎಂದರು. ಪಾಲಿಕೆ ಸದಸ್ಯ ಡಾ| ಪಾಂಡುರಂಗ ಪಾಟೀಲ ಮಾತನಾಡಿ, ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾದರೆ ನೀಡುವ ಮಾತ್ರೆಗಳನ್ನು ಪಾಲಿಕೆ ವತಿಯಿಂದ ನೀಡುವ ಕ್ರಮ ಕೈಗೊಳ್ಳುವುದು ಸೂಕ್ತ ಎಂದರು. 

ರಾಜಣ್ಣ ಕೊರವಿ ಮಾತನಾಡಿ, ಹುಬ್ಬಳ್ಳಿ-ಧಾರವಾಡದಲ್ಲಿ ಎಷ್ಟು ಆಸ್ಪತ್ರೆಗಳಿವೆ ಹಾಗೂ ಎಷ್ಟು ಲ್ಯಾಬ್‌ಗಳಿವೆ ಎಂಬುದರ ಮಾಹಿತಿ ಪಡೆದು ಅಲ್ಲಿಂದ ನಿರಂತರ ಡೆಂಘೀ ರೋಗಿಗಳ ಕುರಿತು ಮಾಹಿತಿ ಪಡೆಯಬೇಕು ಎಂದು ತಿಳಿಸಿದರು. ವೀರಣ್ಣ ಸವಡಿ, ಅಲ್ತಾಫ‌ ಕಿತ್ತೂರ, ಗಣೇಶ ಟಗರಗುಂಟಿ ಮಾತನಾಡಿ, ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದರು. 

Advertisement

ಗುತ್ತಿಗೆದಾರರ ಭದ್ರತಾ ಠೇವಣಿ ಜಪ್ತಿ: ರಸ್ತೆ ಕಾಮಗಾರಿ ಮಾಡಿದ ಗುತ್ತಿಗೆದಾರರು ಗುತ್ತಿಗೆ ಅವಧಿ ಪೂರ್ಣಗೊಳ್ಳದ ರಸ್ತೆಗಳ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಗುತ್ತಿಗೆದಾರರ ಭದ್ರತಾ ಠೇವಣಿ ಜಪು¤ ಮಾಡಿಕೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಎಚ್ಚರಿಕೆ ನೀಡಿದರು.

ರಸ್ತೆಗಳಲ್ಲಿನ ಗುಂಡಿಗಳಿಂದಾಗಿ ಸಂಚರಿಸುವುದು ದುಸ್ತರವಾಗಿದೆ. ಕೂಡಲೇ ಗುತ್ತಿಗೆದಾರರು ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು. ಉಳಿದ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಟ್ರಕ್‌ಗಳಲ್ಲಿ ಕಾಂಕ್ರೀಟ್‌, ಸಕ್ಕರ್‌, ರೋಲರ್‌ ಗಳನ್ನು ಬಳಸಿ ತ್ವರಿತ ಗತಿಯಲ್ಲಿ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು. 

ಮಹಾಪೌರ ಡಿ.ಕೆ. ಚವ್ಹಾಣ ಮಾತನಾಡಿ, ನಗರದ ಹಲವು ರಸ್ತೆಗಳಲ್ಲಿ ತೆಗ್ಗುಗಳಿಂದಾಗಿ ಸಂಚಾರ ಕಷ್ಟವಾಗುತ್ತಿದೆ. ಒಂದೆರಡು ದಿನಗಳಿಂದ ಮಳೆ ಬೀಳುವ ಪ್ರಮಾಣ ಕಡಿಮೆಯಾಗಿರುವುದರಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾಗಬೇಕು ಎಂದರು. ಪಾಲಿಕೆ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next