Advertisement

ಶಾಲೆ ತೆರೆಯುವಾಗಲೇ 15 ಮಕ್ಕಳಲ್ಲಿ ಸೋಂಕು

02:59 PM Aug 09, 2021 | Team Udayavani |

ಹುಣಸೂರು: ತಾಲೂಕಿನಲ್ಲಿ ಕಳೆದ ಎರಡು ವಾರಗಳ ಅವಧಿಯಲ್ಲಿ 12 ರಿಂದ 17 ವರ್ಷದೊಳಗಿನ 15 ಮಕ್ಕಳಲ್ಲಿ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಂಡಿರುವುದು ಆತಂಕ ತಂದಿದೆ. ಈ ನಡುವೆ, ಆ.23ರಿಂದ ಶಾಲೆಗಳು ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಹೀಗಾಗಿ ನಗರಸಭೆ ಹಾಗೂ ಗ್ರಾಪಂಗಳು ಸ್ವಚ್ಛತೆ ಮತ್ತು ಮುಂಜಾಗ್ರತೆಕ್ರಮವಹಿಸಲು ಸೂಚಿಸಿದ್ದೇನೆ ಎಂದು ಶಾಸಕ ಮಂಜುನಾಥ್‌ ತಿಳಿಸಿದರು.

Advertisement

ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕೋವಿಡ್‌ 3ನೇ ಅಲೆ ನಿಯಂತ್ರಣ ಕುರಿತು ಭಾನುವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿ
ಗೋಷ್ಠಿ ನಡೆಸಿದ ಶಾಸಕರು, ನವೋದಯ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ತಿಳಿಸಿದ್ದೇನೆ ಎಂದರು.

ಈಗಾಗಲೇ2 ಅಲೆಗಳಿಂದಜನರು ತತ್ತರಿಸಿದ್ದಾರೆ. ಮುಂದಿನ ದಿನಗಳಲ್ಲಿ3ನೇ ಅಲೆ ನಮ್ಮನ್ನು ಕಾಡಲಿದೆ ಎಂದು ಈಗಾಗಲೇ ತಜ್ಞರು ವರದಿ ನೀಡಿದ್ದಾರೆ. ಅ ನಿಟ್ಟಿನಲ್ಲಿ ಅಧಿಕಾರಿಗಳು-ಜನಪ್ರತಿನಿಧಿಗಳು ಮೈ ಮರೆಯದೆ ಜಾಗೃತರಾಗಬೇಕಿದೆ. ಈ ಹಿಂದೆಯೂ ಸಕಲ ವ್ಯವಸ್ಥೆ ಮಾಡಿಕೊಂಡಿದ್ದರಿಂದ ಹೆಚ್ಚಿನ ಸಮಸ್ಯೆ ಗಳು ಎದುರಾಗಿರಲಿಲ್ಲ. ಈ ಬಾರಿಯು ಕೂಡ 500 ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌, 50 ಬೆಡ್‌ನ‌
ಮಕ್ಕಳ ವಿಶೇಷ ವಾರ್ಡ್‌ ಹಾಗೂ ಆಕ್ಸಿಜನ್‌ಬೆಡ್‌ಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೋವಿಡ್‌ ಸಂಬಂಧಿತ ಮಾತ್ರೆ-ಔಷಧಕ್ಕಾಗಿ ಮೆಡಿಕಲ್ಸ್‌ ಸ್ಟೋರ್‌ ಮಾಲಿಕರಿಗೂ ಸೂಚಿಸಲಾಗಿದೆ. ಅಗತ್ಯವಿರುವೆಡೆ ಚೆಕ್‌ಪೋಸ್ಟ್‌ ಹಾಗೂ ಮಾಸ್ಕ್ ಹಾಕದವರಿಗೆ ದಂಡ ಇನ್ನಿತರ ಕಠಿಣ ಕ್ರಮಗಳನ್ನು ಜಾರಿಗೆ ತಂದು ಜನರ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಗೌರವ ಸಮರ್ಪಣೆ: ವರ್ಗಾವಣೆಗೊಂಡಿರುವ ತಹಶೀಲ್ದಾರ್‌ ಬಸವರಾಜ್‌ ಸೇರಿದಂತೆ ವಾರಿಯಾರ್ಸ್‌ಗಳಾಗಿ ಕಾರ್ಯನಿರ್ವಹಿಸಿದ್ದ ಡಿವೈಎಸ್ಪಿ
ರವಿಪ್ರಸಾದ್‌, ವೈದ್ಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಗ್ರಾಪಂ ಅಧ್ಯಕ್ಷರು ಹಾಗೂ ಶವ ಸಂಸ್ಕಾರದಲ್ಲಿ ತೊಡಗಿದ ತಂಡವನ್ನು ಆ.15ರಂದು ನಡೆಯುವ ಸರಳ ಕಾರ್ಯ ಕ್ರಮದಲ್ಲಿ ಅಭಿನಂದಿಸಲಾಗುತ್ತದೆ ಎಂದರು.

Advertisement

ಮಾಜಿ ಸೈನಿಕರಿಂದ ಅಖಂಡ ಜ್ಯೋತಿ: ಹಳೇ ಬಸ್‌ ನಿಲ್ದಾಣ ಮುಂಭಾಗ ಸಂವಿಧಾನ ವೃತ್ತ ಉದ್ಘಾಟನೆ ಮತ್ತು ನಂತರ ಶಾಸಕ ಕಚೇರಿಯಲ್ಲಿ ನಮ್ಮ ಸೈನ್ಯ ನಮ್ಮ ಹೆಮ್ಮೆ ಎಂಬ ಅಖಂಡ ಜ್ಯೋತಿ ಸ್ಥಾಪಿಸಿದ್ದು, ಇದನ್ನು ಸೈನ್ಯದಲ್ಲಿ ನಿವೃತ್ತಿಯಾಗಿ ಆಗಮಿಸಿರುವ ಕಟ್ಟೆಮಳಲವಾಡಿಯ ವಿಠಲ ಮೂರ್ತಿ ಹಾಗೂ ಹನಗೋಡಿನ ಅನಿಲ್‌ ಅವರು ಅಖಂಡ ಜ್ಯೋತಿ ಬೆಳಗಿಸುವ ಕಾರ್ಯಕ್ರಮದ ಮೂಲಕ್ಕೆ ದೇಶದ ಸೈನಿಕರನ್ನು ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ನಗರಸಭೆ ಅಧ್ಯಕ್ಷೆ ಅನುಷಾ,ತಾಪಂ ಇಒ ಎಚ್‌. ಡಿ.ಗಿರೀಶ್‌, ತಹಶೀಲ್ದಾರ್‌
ಮೋಹನ್‌, ಡಿವೈಎಸ್ಪಿ ರವಿಪ್ರಸಾದ್‌, ಟಿಎಚ್‌ಒ ಡಾ|ಕೀರ್ತಿಕುಮಾರ್‌, ಪೌರಾಯುಕ್ತ ರಮೇಶ್‌, ಎಇಇ ಬೋಜರಾಜ್‌, ಸಿಡಿಪಿಒ ರಶ್ಮಿ ಇತರರಿದ್ದರು.

ವಾರಕ್ಕೆ 10 ಸಾವಿರ ಲಸಿಕೆ ನೀಡಲು ಸಚಿವರಲ್ಲಿ ಕೋರಿಕೆ
ತಾಲೂಕಿನಲ್ಲಿ ಪ್ರತಿನಿತ್ಯ 3 ಸಾವಿರ ಡೋಸ್‌ ಲಸಿಕೆ ನೀಡಿ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿದರೆ, ಕೋವಿಡ್‌  ಸೆಡ್ಡು ಹೊಡೆಯಬಹುದು. ವಾರಕ್ಕೆಕನಿಷ್ಠ 10 ಸಾವಿರ ಲಸಿಕೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇನೆ. ನಾನು ಮಾಡಿದ ಎಲ್ಲ ಪ್ರಯತ್ನದಿಂದ ತಾಲೂಕಿನ ಜನತೆಗೆ ಲಸಿಕೆಕೊಡಿಸುವಲ್ಲಿ ಯಶಸ್ವಿಯಾಗಿ ಜಿಲ್ಲೆಯಲ್ಲಿ ನಾವು ಮುಂದೆ ಇದ್ದೇವೆ ಎಂದು ಶಾಸಕ ಮಂಜುನಾಥ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next