Advertisement

ತರಕಾರಿ ನೀಡದ್ದಕ್ಕೆ ಜೈಲು!

09:25 AM Jun 22, 2018 | Team Udayavani |

ಪಟ್ನಾ: ತಮಗೆ ಉಚಿತವಾಗಿ ತರಕಾರಿ ನೀಡಲಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಸ್ಥಳೀಯ ಪೊಲೀಸರು, ತರಕಾರಿ ವ್ಯಾಪಾರಿಯೊಬ್ಬನ ಮಗನ‌ನ್ನು ಬಂಧಿಸಿ, 3 ತಿಂಗಳ ಜೈಲು ಶಿಕ್ಷೆಗೆ ಗುರಿಪಡಿಸಿರುವುದು ವಿವಾದ ಎಬ್ಬಿಸಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ತಮ್ಮ ಪುತ್ರ ಅಪ್ರಾಪ್ತ ವಯಸ್ಸಿನವನಾಗಿದ್ದು ಆತನನ್ನು ಬಂಧನದಲ್ಲಿ ಇರಿಸಿರುವುದು ಅಕ್ರಮ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ. ಬಾಲಕನ ಆಧಾರ್‌ ಕಾರ್ಡ್‌ ಆತನಿಗೆ 14 ವರ್ಷ ಎಂದು ಸಾರಿದೆ. ಆದರೂ ಪೊಲೀಸರು ಮಾತ್ರ, ಹುಡುಗ 18 ವರ್ಷದವನಾಗಿದ್ದು, ಬೈಕ್‌ ಕಳ್ಳರ ಗ್ಯಾಂಗಿನಲ್ಲಿದ್ದವನು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next