Advertisement

’13’ movie review: ಹಣದ ಹಿಂದೆ ಬಿದ್ದವರ ಹುಡುಕಾಟ

05:35 PM Sep 16, 2023 | Team Udayavani |

ಅನ್ಯಧರ್ಮಿಯರಾದರೂ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದವರು ಮೋಹನ್‌ ಮತ್ತು ಸಾಹೀರಾ ಬಾನು. ಗುಜರಿ ವ್ಯಾಪಾರ ಮಾಡುವ ಮೋಹನ್‌, ಟೀ ಅಂಗಡಿ ನಡೆಸುವ ಸಾಹೀರಾ ಬಾನು ತಾವಾಯಿತು, ತಮ್ಮ ಕೆಲಸವಾಯಿತು ಎಂದು ಬದುಕುತ್ತಿರುವ ಆದರ್ಶ ದಂಪತಿಗಳು. ಇಂಥ ದಂಪತಿಗಳ ಜೀವನದಲ್ಲಿ ಅಚಾನಕ್ಕಾಗಿ ಬರುವ “13′ ಎಂಬ ನಂಬರ್‌, ಇವರ ದಿಕ್ಕನ್ನೇ ಬದಲಾಯಿಸುತ್ತದೆ. ತಮ್ಮಷ್ಟಕ್ಕೆ ತಾವಿದ್ದ ಮೋಹನ್‌-ಸಾಹೀರಾ ದಂಪತಿ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರುವಂತಾಗುತ್ತದೆ. ಹಾಗಾದರೆ, ನಿಜಕ್ಕೂ ಮೋಹನ್‌-ಸಾಹೀರಾ ಬಾಳಲ್ಲಿ ನಡೆಯುವುದಾದರೂ ಏನು? ಇವರಿಗೂ ಈ ನಂಬರಿಗೂ ಏನು ಸಂಬಂಧ? ಇದೇ ವಿಷಯವನ್ನು ಇಟ್ಟುಕೊಂಡು, ಈ ವಾರ ತೆರೆಗೆ ಬಂದಿರುವ ಸಿನಿಮಾ “13′

Advertisement

ಇದೊಂದು ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಶೈಲಿಯ ಸಿನಿಮಾ. ಹವಾಲಾ ಹಣದ ಹಿಂದೆ ಬೀಳುವ ಒಂದಷ್ಟು ಜನರು ಅದನ್ನು ಪಡೆಯಲು ಏನೇನು ಸರ್ಕಸ್‌ ಮಾಡುತ್ತಾರೆ. ಈ ಚಕ್ರವ್ಯೂಹದೊಳಗೆ ಏನೇನು ನಡೆಯುತ್ತದೆ. ಅಂತಿಮವಾಗಿ ಈ ಕಣ್ಣಾಮುಚ್ಚಾಲೆ ಆಟಕ್ಕೆ ಕೊನೆ ಹೇಗೆ ಎಂಬುದೇ “13′ ಸಿನಿಮಾದ ಕ್ಲೈಮ್ಯಾಕ್ಸ್‌. ಅದು ಹೇಗೆ ಎಂಬ ಕುತೂಹಲವಿದ್ದರೆ, ನೀವು ಒಮ್ಮೆ ಥಿಯೇಟರ್‌ ನತ್ತ ಮುಖ ಮಾಡಬಹುದು.

ಸಸ್ಪೆನ್ಸ್‌-ಥ್ರಿಲ್ಲರ್‌ ಜೊತೆಗೆ ಕಾಮಿಡಿ, ಎಮೋಶನ್ಸ್‌, ಐಟಂ ಸಾಂಗ್‌ ಹೀಗೆ ಒಂದಷ್ಟು ಅಂಶಗಳನ್ನು ಸೇರಿಸಿ “13′ ಸಿನಿಮಾವನ್ನು ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಮೊದಲರ್ಧ ಬಹುತೇಕ ಎಲ್ಲಾ ಸಿನಿಮಾಗಳಂತೆ ಸಾಮಾನ್ಯವಾಗಿ ಸಾಗುವ ಕಥೆ, ದ್ವಿತೀಯರ್ಧದ ಬಳಿಕ ಒಂದಷ್ಟು ತಿರುವು ಪಡೆದುಕೊಳ್ಳುತ್ತದೆ. ಈ ಮೂಲಕ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗುತ್ತದೆ.

ನಟ ರಾಘವೇಂದ್ರ ರಾಜ್‌ಕುಮಾರ್‌ “13′ ಸಿನಿಮಾದಲ್ಲಿ ಮೋಹನ್‌ ಕುಮಾರ್‌ ಎಂಬ ಗುಜರಿ ವ್ಯಾಪಾರಿ ಪಾತ್ರದಲ್ಲಿ, ಸಾಹಿರಾಭಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ನಟಿ ಶ್ರುತಿ ಕಾಣಿಸಿಕೊಂಡಿದ್ದಾರೆ. ಪ್ರಮೋದ್‌ ಶೆಟ್ಟಿ ನೆಗೆಟಿವ್‌ ಶೇಡ್‌ನ‌ ಪೊಲೀಸ್‌ ಅಧಿಕಾರಿಯಾಗಿ ಮತ್ತು ದಿಲೀಪ್‌ ಪೈ ಹವಾಲ ಏಜೆಂಟ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ವರು ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next