Advertisement

ಕಿಷ್ತ್‌ವಾರ್‌: 300 ಅಡಿ ಆಳಕ್ಕೆ ಉರುಳಿದ ಬಸ್‌;13 ಮಂದಿ ದುರ್ಮರಣ 

02:23 PM Sep 14, 2018 | Team Udayavani |

ಕಿಷ್ತ್‌ವಾರ್‌: ಜಮ್ಮು ಮತ್ತು ಕಾಶ್ಮೀರದಲ್ಲಿ  ನಡೆದ ಘೋರ ದುರಂತವೊಂದರಲ್ಲಿ  ಬಸ್ಸೊಂದು 300 ಅಡಿ ಅಳದ ಪ್ರಪಾತಕ್ಕೆ ಉರುಳಿ ಬಿದ್ದಿದ್ದು 13 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. 

Advertisement

ತಾಕ್‌ರೈನ ದಾಂದಾರನ್‌ ಎಂಬಲ್ಲಿ  ಈ ಅವಘಡ ನಡೆದಿದ್ದು , ಬಸ್‌ ಸ್ಕಿಡ್‌ ಆಗಿ ಪ್ರಪಾತಕ್ಕೆ ಬಿದ್ದಿದೆ. 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಬಸ್‌ ಪ್ರಪಾತಕ್ಕೆ ಬಿದ್ದೊಡನೆಯೆ ರಕ್ಷಣಾ ಕಾರ್ಯ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಮತ್ತು ಶವಗಳನ್ನು ಮೇಲಕ್ಕೆತ್ತಲು ಹರಸಾಹಸ ಪಡಬೇಕಾಯಿತು  ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next