Advertisement

ಕೊರೊನಾ ಕಂಟಕ: ಇರಾನ್ ನಿಂದ 120 ಭಾರತೀಯರನ್ನು ಕರೆತರಲಿರುವ ಏರ್ ಇಂಡಿಯಾ ವಿಮಾನ

12:00 AM Mar 21, 2020 | Mithun PG |

ನವದೆಹಲಿ: ಕೊರೊನಾಘಾತಕ್ಕೆ ಸಿಲುಕಿರುವ ಇರಾನ್ ನಿಂದ 120 ಭಾರತೀಯರು ಇಂದು(ಶುಕ್ರವಾರ) ಏರ್ ಇಂಡಿಯಾ ವಿಮಾನದ ಮೂಲಕ ಭಾರತಕ್ಕೆ ಮರಳಲಿದ್ದಾರೆ. ಇವರನ್ನು ರಾಜಸ್ಥಾನದ ಜೈಸಲ್ಮೇರ್ ನಲ್ಲಿ ನಿರ್ಮಿಸಲಾಗಿರುವ ಸೇನಾ ಕೇಂದ್ರದ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗುವುದು ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

120 ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಕೂಡ ಪರೀಕ್ಷೆಗೆ ಒಳಪಡಿಸಲಾಗುವುದು. ನಂತರ ಭಾರತೀಯ ಸೇನೆಯ ಜೈಸಲ್ಮೇರ್ ಕೇಂದ್ರದಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗುವುದು ಎಂದು ರಕ್ಷಣಾ ವಕ್ತಾರ ಕರ್ನಲ್ ಸೋಂಬಿತ್ ಘೋಷ್ ತಿಳಿಸಿದ್ದಾರೆ.

ಮಾರ್ಚ್ 14 ರಂದು ಉಳಿದ 250 ಜನರು ಇರಾನ್ ನಿಂದ ಭಾರತಕ್ಕೆ ಕರೆತರಲಾಗುದು. ಇವರನ್ನು ಕೂಡ ಜೈಸಲ್ಮೇರ್ ಕೇಂದ್ರದಲ್ಲೆ ತಪಾಸಣೆಗೊಳಪಡಿಸಲಾಗುವುದು ಎಂದು ವರದಿ ತಿಳಿಸಿದೆ

ಭಾರತದ ರಕ್ಷಣಾ ಸಚಿವಾಲಯ ಈಗಾಗಲೇ ಕೊರೊನಾ ಮಹಾಮಾರಿ ಆವರಿಸಿರುವ ದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನದಲ್ಲಿದೆ. ಮಾತ್ರವಲ್ಲದೆ ಇವರ ರಕ್ಷಣೆಗಾಗಿ ಜೋಧ್ ಪುರ್, ಜಾನ್ಸಿ, ಕೊಲ್ಕತ್ತಾ, ಚೆನ್ನೈ, ಸೂರತ್ ಘಢ್, ಮುಂತಾದ ಕಡೆ ವಿಶೇಷ ಕೇಂದ್ರಗಳನ್ನು ತೆರಯಲಾಗಿದೆ.

ವಿದೇಶಾಂಗ ಸಚಿವ ಎಸ್ ಜೈಶಂಕರ್ ಈ ಕುರಿತು ಪ್ರತಿಕ್ರಿಯಿಸಿ, ಇರಾನ್ ನಿಂದ ಕರೆತರಲಾಗುವ ಭಾರತೀಯರ ಸುರಕ್ಷತೆಗೆ ಹೆಚ್ಚಿನ ಗಮನ ಕೊಡಲಾಗುವುದು. ಮಹರಾಷ್ಟ್ರ ಮತ್ತು ಜಮ್ಮು ಕಾಶ್ಮೀರದ 1100 ಯಾತ್ರಿಗಳು ಸೇರಿದಂತೆ ಇರಾನ್ ನಲ್ಲಿ 6,000 ಭಾರತೀಯರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next