Advertisement

ಟ್ರಕ್ ಢಿಕ್ಕಿಯಾಗಿ 12 ಮಂದಿ ಕನ್ವರ್ ಯಾತ್ರಿಕರಿಗೆ ಗಂಭೀರ ಗಾಯ

02:26 PM Jul 28, 2022 | Team Udayavani |

ಶಹಜಾನ್ ಪುರ್ : ಟ್ರಕ್ಕೊಂದು ಗುದ್ದಿದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ 12 ಮಂದಿ ಕನ್ವರ್ ಯಾತ್ರಿಕರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಕಟಿಯುಲಿ ಗ್ರಾಮದ ಬಳಿ ಈ ಘಟನೆ ನಡೆದಿದೆ.

Advertisement

ಗಂಗಾ ನದಿಯ ಘಾಟಿಯಾ ಘಾಟ್‌ನಿಂದ ನೀರು ಸಂಗ್ರಹಿಸಿದ ನಂತರ ಕನ್ವರ್ ಯಾತ್ರಿಗಳು ಗೋಲ ಗೋಕರನ್ ನಾಥಕ್ಕೆ ತೆರಳುತ್ತಿದ್ದರು ಎಂದು ಅಲ್ಲಾಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಪ್ರದೀಪ್ ಶೆರಾವತ್ ಹೇಳಿದ್ದಾರೆ.

ಎರಡು ಟ್ರಾಲಿಗಳನ್ನು ಟ್ರ್ಯಾಕ್ಟರ್‌ಗೆ ಕಟ್ಟಲಾಗಿದ್ದು, ಒಂದು ಟ್ರಕ್‌ ಢಿಕ್ಕಿ ಹೊಡೆದ ನಂತರ ಅವುಗಳಲ್ಲಿ ಒಂದು ಪಲ್ಟಿಯಾಗಿದೆ. ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದರು.

ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ಸಹಾಯದಿಂದ ಟ್ರಾಲಿಯಡಿಯಿಂದ ಗಾಯಗೊಂಡವರನ್ನು ಹೊರತೆಗೆದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶೆರಾವತ್ ತಿಳಿಸಿದ್ದಾರೆ. ಉಳಿದ ಯಾತ್ರಿಕರು ಯಾತ್ರೆಯನ್ನು ಮುಂದುವರೆಸಿದರು ಎಂದು ಅವರು ಹೇಳಿದರು.

ಟ್ರಕ್ಕೊಂದು ಕನ್ವರ್ ಯಾತ್ರಿಗಳ ಗುಂಪಿಗೆ ಢಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ ಅವಘಡ ಇತ್ತೀಚೆಗೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಬಧರ್ ಗ್ರಾಮದ ನಡೆದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next