Advertisement

ಬಟ್ಟೆ ತರಲು ಅಂಗಡಿಗೆ ಕರೆದೊಯ್ಯದಿದ್ದಕ್ಕೆ ಬಾಲಕಿ ಆತ್ಮಹತ್ಯೆ

02:27 PM Aug 23, 2022 | Team Udayavani |

ಬೆಂಗಳೂರು: ಬಟ್ಟೆ ತರಲು ತನ್ನನ್ನು ಕರೆದೊಯ್ಯಲಿಲ್ಲ ಎಂದು ಬೇಸರಗೊಂಡ 11 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜಪೇಟೆ ಠಾಣಾ ವ್ಯಾಪ್ತಿ ಯಲ್ಲಿ ನಡೆದಿದೆ.

Advertisement

ಆನಂದಪುರ ನಿವಾಸಿ ವೈಶಾಲಿ(11) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಶನಿವಾರ ಸಂಜೆ ವೈಶಾಲಿ ಪೋಷಕರು ಹಬ್ಬದ ನಿಮಿತ್ತ ಮೂವರು ಮಕ್ಕಳ ಪೈಕಿ ವೈಶಾಲಿಗೆ ಮೊದಲೇ ಬಟ್ಟೆ ಖರೀದಿಸಿ ತಂದಿ ದ್ದರು. ಇಬ್ಬರು ಮಕ್ಕಳಿಗೆ ತಂದಿರಲಿಲ್ಲ. ಹೀಗಾಗಿ ಆ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಟ್ಟೆ ಅಂಗಡಿಗೆ ಹೋಗಿದ್ದಾರೆ.

ಹೀಗಾಗಿ ಬೇಸರಗೊಂಡು ವೈಶಾಲಿ ತನ್ನನ್ನು ಬಟ್ಟೆ ಅಂಗಡಿಗೆ ಕರೆ ದೊಯ್ಯಲಿಲ್ಲ ಎಂದು ಮನೆಯಲ್ಲಿ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪೋಷಕರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next