Advertisement

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?

10:52 PM May 19, 2022 | Team Udayavani |

ಬಾಲಾಘಾಟ್‌: ಮಧ್ಯಪ್ರದೇಶದ ಬಾಲಾಘಾಟ್‌ ಜಿಲ್ಲೆಯ ಚಿನ್ನ, ಬೆಳ್ಳಿ ಮಾರಾಟಗಾರ ರಾಕೇಶ್‌ ಸುರಾನ ತನ್ನ 11 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಿದ್ದಾರೆ!

Advertisement

 ಕಾರಣವೇನು ಗೊತ್ತೇ?: ಮುಂದಿನ ಜೀವನವನ್ನು ಉಪವಾಸದಲ್ಲಿ ಕಳೆಯುತ್ತ ಭಗವಂತನನ್ನು ಸೇರಿಕೊಳ್ಳಲು!

ರಾಕೇಶ್‌ಗೆ ಬಹಳ ಹಿಂದಿನಿಂದಲೇ ಈ ಹಾದಿಯಲ್ಲಿ ಆಸಕ್ತಿ­ಯಿತ್ತು. ಆದರೆ ಮಗ ಚಿಕ್ಕವನು ಎಂದು ಸುಮ್ಮನಿದ್ದರು. ಈಗ ಮಗ ಅಮಯ್‌ಗೆ 7 ವರ್ಷ, ಪತ್ನಿ ಲೀನಾಗೆ 36 ವರ್ಷ. ವಿಶೇಷವೆಂದರೆ ಲೀನಾ ಮತ್ತು ಅಮಯ್‌ ಕೂಡ ಇದೇ ತೀರ್ಮಾನ ಮಾಡಿದ್ದಾರೆ.

ಒಟ್ಟಾರೆ ಮೂವರೂ ಪ್ರಾಪಂಚಿಕ ಬದುಕು ತ್ಯಜಿಸಿ, ಉಪವಾಸ ಕೈಗೊಳ್ಳಲು ಮನಸ್ಸು ಮಾಡಿದ್ದಾರೆ. ಈ ಕುಟುಂಬವನ್ನು ಬಾಲಾಘಾಟ್‌ ಜೈನ ಸಮಾಜ ಬಾಂಧವರು ಹೃತ್ಪೂರ್ವಕವಾಗಿ ಬೀಳ್ಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next