Advertisement

ಚಿತ್ತಾಪುರ ಕ್ಷೇತ್ರದಲ್ಲೂ ಬಿಜೆಪಿ ಬಾವುಟ ಹಾರಿಸಿ

04:03 PM Sep 26, 2021 | Team Udayavani |

ಚಿತ್ತಾಪುರ: ಭಾರತ ದೇಶ ಕಂಡ ಅತ್ಯಂತ ಸಜ್ಜನ, ಸರಳ, ಸಿದ್ಧಾಂತ ಅಳವಡಿಸಿಕೊಂಡಿದ್ದ ರಾಜಕಾರಣಿ ಪಂಡಿತ ದೀನ ದಯಾಳ ಉಪಾಧ್ಯಾಯ ರಾಷ್ಟ್ರಕ್ಕಾಗಿ ಜೀವನ ಅರ್ಪಿಸಿದ ಶ್ರೇಷ್ಠ ನಾಯಕರಾಗಿದ್ದರು ಎಂದು ಸಂಸದ ಡಾ| ಉಮೇಶ ಜಾಧವ ಹೇಳಿದರು.

Advertisement

ಪಟ್ಟಣದ ಬಾಪುರಾವ್‌ ಪಾಟೀಲ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪಂಡಿತ ದೀನದಯಾಳ ಉಪಾಧ್ಯಾಯರ 105ನೇ ಜನ್ಮದಿನದ ಅಂಗವಾಗಿ ದೀಪದಿಂದ ಕಮಲದ ವರೆಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೀನ ದಯಾಳ ಅವರಲ್ಲಿನ ಪಕ್ಷ ನಿಷ್ಠೆ, ರಾಷ್ಟ್ರ ಭಕ್ತಿ ನಮಗೆಲ್ಲಾ ಸದಾ ಪ್ರೇರಣೆ. ಅವರ ಆದರ್ಶ, ತತ್ವ, ಸಿದ್ಧಾಂತ ಅಳವಡಿಸಿಕೊಳ್ಳುವ ಮೂಲಕ ಪಕ್ಷದ ಸಂಘಟನೆಯಲ್ಲಿ ತೊಡಗಿ, ಮತ್ತೆ ದೇಶದಲ್ಲಿ, ರಾಜ್ಯದಲ್ಲಿ ಅಷ್ಟೇ ಅಲ್ಲ ಚಿತ್ತಾಪುರ ಕ್ಷೇತ್ರದಲ್ಲೂ ಬಿಜೆಪಿ ಬಾವುಟ ಹಾರಿಸಬೇಕು ಎಂದು ಕರೆ ನೀಡಿದರು. ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ ಮಾತನಾಡಿ, ಭಾರತೀಯ ಜನತಾ ಪಕ್ಷ ಇಷ್ಟು ಎತ್ತರಕ್ಕೆ ಬೆಳೆಯಲು ದೀನದಯಾಳ ಆದರ್ಶಗಳೇ ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ದೀನದಯಾಳ ಜೀವನ ಚರಿತ್ರೆ ತಿಳಿದುಕೊಳ್ಳಬೇಕು ಎಂದರು. ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ನಾಮದೇವ ಕರಹರಿ ಪಂಡಿತ ದೀನದಯಾಳ ಉಪಾಧ್ಯಾಯರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ, ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್‌, ಒಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ಮುಖಂಡರಾದ ಅರವಿಂದ ಚವ್ಹಾಣ, ಸೋಮಶೇಖರ ಪಾಟೀಲ ಬೆಳಗುಂಪಾ, ಗೋಪಾಲ ರಾಠೊಡ, ರಾಜು ಮುಕ್ಕಣ್ಣ, ವಿಠಲ ಜಾಧವ, ನಾಗರಾಜ ಭಂಕಲಗಿ, ಬಸವರಾಜ ಮಡ್ಡಿ, ಗುಂಡಣ್ಣ ಬಾಳಿ, ಪೋಮು ರಾಠೊಡ, ಭೀಮಣ್ಣ ಸೀಬಾ, ಶಿವಯ್ಯ ಗುತ್ತೇದಾರ, ಭೀಮರೆಡ್ಡಿ ಕುರಾಳ, ಅಣ್ಣಾರಾವ ಬಾಳಿ, ರಮೇಶ ಬೊಮ್ಮನಳ್ಳಿ, ಶಾಮ ಮೇದಾ, ನಿವೇದಿತಾ ಸಹಿಂಡೆ, ಶಾಂತಕುಮಾರ ಮಳಖೇಡ, ಸಿದ್ರಾಮಯ್ಯ ಗೊಂಬಿಮಠ, ಗುಂಡು ಪಾಟೀಲ, ಇಂದ್ರಮ್ಮರೆಡ್ಡಿ, ನಾಗುಬಾಯಿ ಜಿತುರೆ, ರಮೇಶ ಕಾರಬಾರಿ, ವೀರಣ್ಣ ಯಾರಿ, ರವಿ ನಾಯಕ, ಸುರೇಶ ಬೆನಕನಳ್ಳಿ, ಬಾಲಾಜಿ ಬುರಬುರೆ, ಹಣಮಂತ ಬೆಂಕಿ, ಶಿವರಾಮ ಪವಾರ, ಶರಣಗೌಡ ಭೀಮನಳ್ಳಿ, ಅಶ್ವತ್ಥ್ ರಾಠೊಡ, ಆನಂದ ಪಾಟೀಲ ನರಬೋಳ, ಭೀಮಶ್ಯಾ ಜೀರೊಳ್ಳಿ, ಶಿವರಾಮ ಚವ್ಹಾಣ ಇದ್ದರು. ಅಯ್ಯಪ್ಪ ರಾಮತೀರ್ಥ ಪ್ರಾರ್ಥಿಸಿದರು, ಬಸವರಾಜ ಪಂಚಾಳ ಸ್ವಾಗತಿಸಿದರು, ರಾಮದಾಸ ಚವ್ಹಾಣ ನಿರೂಪಿಸಿದರು.

ಪ್ರಧಾನಿ ಮೋದಿಯಿಂದ ದೇಶ ಅಭಿವೃದ್ಧಿ ಪಥದತ್ತ: ಶಶಿಕಲಾ ಟೆಂಗಳಿ

ಜೇವರ್ಗಿ: ಜನಸಂಘದ ಸಂಸ್ಥಾಪಕ, ವಿದ್ವಾಂಸ, ಸಂಘಟನಾಕಾರ ಅಪ್ರತಿಮ ಹೋರಾಟಗಾರ, ಪಂಡಿತ ದೀನ ದಯಾಳ ಉಪಾಧ್ಯಾಯ ಅವರ ತತ್ವಾದರ್ಶ ಹಾಗೂ ಸಿದ್ಧಾಂತಗಳಿಂದ ಬಿಜೆಪಿ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ ಮಹಾನ್‌ ಚೇತನ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಹೇಳಿದರು.

Advertisement

ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಂಡಲದ ವತಿಯಿಂದ ಶನಿವಾರ ಆಯೋಜಿಸಿದ್ದ ಪಂಡಿತ ದೀನ ದಯಾಳ ಉಪಾಧ್ಯಾಯರ 105ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೀನ ದಯಾಳ ಉಪಾಧ್ಯಾಯ ಅವರು ಕಂಡಿದ್ದ ಮುನ್ನೋಟದ ಹಾದಿಯಲ್ಲಿಯೇ ಹೆಜ್ಜೆಯಿಡುತ್ತಾ ಮುಂದೆ ಸಾಗುತ್ತಿದೆ. ಮೋದಿ ಅವರು ದೇಶದ ಪ್ರಧಾನಿಯಾದ ನಂತರ ಭಾರತ ದೇಶದ ದಿಕ್ಕೇ ಬದಲಾಗಿದೆ. ಮುಂದುವರಿದ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದೆ. ಪ್ರಧಾನಿ ಮೋದಿ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಗೂ ಮುಂಚೆ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ಬೂತ್‌ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪಕ್ಷದ ಪದಾಧಿ ಕಾರಿಗಳು, ಕಾರ್ಯಕರ್ತರು ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆಗೆ ಪಕ್ಷವನ್ನು ಸಂಘಟಿಸಲು ಒತ್ತು ನೀಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ರಾಚಯ್ಯ ಹಿರೇಮಠ ಅರಳಗುಂಡಗಿ, ಆದಪ್ಪ ಸಾಹು ಸಿಕೇದ್‌ ಕೋಳಕೂರ, ಬಿಜೆಪಿ ಹಿರಿಯ ಮುಖಂಡ ಹಳ್ಳೆಪ್ಪಾಚಾರ್ಯ ಜೋಶಿ ಕಾಸರಭೋಸಗಾ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಹಿರಿಯ ಮುಖಂಡರಾದ ರಮೇಶಬಾಬು ವಕೀಲ, ಧರ್ಮಣ್ಣ ದೊಡ್ಡಮನಿ, ಜಿಪಂ ಮಾಜಿ ಸದಸ್ಯೆ ಶೋಭಾ ಬಾಣಿ, ಜೇವರ್ಗಿ ಬಿಜೆಪಿ ಮಂಡಲ ಅಧ್ಯಕ್ಷ ಭೀಮರಾವ್‌ ಗುಜಗೊಂಡ, ಬಸವರಾಜ ಪಾಟೀಲ ನರಿಬೋಳ, ಸಿದ್ಧಣ್ಣ ಹೂಗಾರ, ಧರ್ಮಣ್ಣ ಇಟಗಾ, ಬಸವರಾಜ ಪಾಟೀಲ ಕುಕನೂರ, ಪುಂಡಲೀಕ ಗಾಯಕವಾಡ, ಮಲ್ಲಿನಾಥಗೌಡ ಯಲಗೋಡ, ಬಸವರಾಜ ಮಾಲಿಪಾಟೀಲ ಅರಳಗುಂಡಗಿ, ರೇವಣಸಿದ್ಧಪ್ಪ ಸಂಕಾಲಿ, ಸಾಯಬಣ್ಣ ದೊಡ್ಡಮನಿ, ಕೇದಾರಲಿಂಗಯ್ಯ ಹಿರೇಮಠ, ಶರಣು ಪೂಜಾರಿ, ವಿಶಾಲ ಹಿರೇಮಠ ಸೇರಿದಂತೆ ಜೇವರ್ಗಿ, ಯಡ್ರಾಮಿ ತಾಲೂಕು ಬಿಜೆಪಿ ಮಂಡಲದ ಪದಾ ಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next