Advertisement

1008 ತೆಂಗಿನಕಾಯಿಯ ಮೂಡುಗಣಪತಿ ಸೇವೆ

12:47 PM Nov 24, 2017 | |

ಪಾವಂಜೆ : ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾಷಷ್ಠಿ ಪ್ರಯುಕ್ತ ತೆಂಗಿನಕಾಯಿಯಿಂದ ನಿರ್ಮಿಸಿದ ವಿಶಿಷ್ಟ ಮೂಡುಗಣಪತಿ ಸೇವೆ ನೆರವೇರಿದೆ.

Advertisement

ಈ ಸೇವೆ ಅತಿ ಪುರಾತನ ಹಾಗೂ ಫಲದಾಯಕ ಎಂಬ ನಂಬಿಕೆಯಿದೆ. ಭಕ್ತರು ತೆಂಗಿನಕಾಯಿಯನ್ನು ಎರಡು ಹೋಳು ಮಾಡಿ ತಮ್ಮ ವೈಯುಕ್ತಿಕ ಹರಕೆಯನ್ನು ಈ ರೀತಿ ಸಲ್ಲಿಸಬಹುದು. ತೆಂಗಿನಕಾಯಿಯ ಹೋಳಿನಿಂದಲೇ ಗಣಪತಿ ಆಕಾರವನ್ನು ನಿರ್ಮಿಸಿ ಅದಕ್ಕೆ ಸೀರೆಯ ಹೊದಿಕೆಯ ಶೃಂಗಾರ ಮಾಡಿ ದಿನಪೂರ್ತಿ ಇಡಲಾಗುತ್ತದೆ. ಸೇವಾದಾರರು ತೆಂಗಿನಕಾಯಿಯೊಂದಿಗೆ ಗರಿಕೆ, ಹೂ, ಬಾಳೆಹಣ್ಣು, ಅರಸಿನ, ಕುಂಕುಮ, ಕರ್ಪೂರ, ಅಗರಬತ್ತಿ, ವೀಳ್ಯದೆಲೆ, ಅಡಿಕೆಯನ್ನು ನೀಡಬೇಕು.

ಮೂಡುಗಣಪತಿಯನ್ನು ನಿರ್ಮಿಸಿದ ಬಳಿಕ ಗಣಹೋಮ ಇತ್ಯಾದಿ ಧಾರ್ಮಿಕ ವಿಧಿ ವಿಧಾನ ನಡೆದ ಬಳಿಕ ಭಕ್ತರೇ ಇದಕ್ಕೆ ಆರತಿ ಬೆಳಗಿ ಇಷ್ಟಾರ್ಥವನ್ನು ನಿವೇದಿಸಿಕೊಳ್ಳುತ್ತಾರೆ. ಅನಂತರ ಬಳಸಿದ ತೆಂಗಿನಕಾಯಿಯನ್ನು ಭಕ್ತರಿಗೆ ಹಂಚಲಾಗುತ್ತದೆ. ಈ ಮೂರ್ತಿಗೆ ಕನಿಷ್ಠ 1,008 ತೆಂಗಿನಕಾಯಿ ಬಳಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next