Advertisement

ಉತ್ತರಾಖಂಡದಲ್ಲಿ ಬಸ್ಸು ಪ್ರಪಾತಕ್ಕೆ ಬಿದ್ದು 10 ಸಾವು, 9 ಮಂದಿ ಗಂಭೀರ

11:08 AM Jul 19, 2018 | udayavani editorial |

ಡೆಹರಾಡೂನ್‌ : ಹೃಷೀಕೇಶ – ಗಂಗೋತ್ರಿ ಹೈವೇಯಲ್ಲಿ ಸೂರ್ಯಧಾರ್‌ ಎಂಬಲ್ಲಿಗೆ ಸಮೀಪ ಉತ್ತರಾಖಂಡ ಸಾರಿಗೆ ನಿಗಮದ ಬಸ್ಸು 250 ಮೀಟರ್‌ ಆಳದ ಪ್ರಪಾತಕ್ಕೆ ಬಿದ್ದ ಭೀಕರ ಅಪಘಾತದಲ್ಲಿ ಕನಿಷ್ಠ ಹತ್ತು ಮಂದಿ ಮೃತಪಟ್ಟು  ಇತರ 9 ಮಂದಿ ಗಂಭೀರವಾಗಿ ಗಾಯಗೊಂಡರು.

Advertisement

ಅಪಘಾತ ಸಂಭವಿಸಿದಾಗ ಬಸ್ಸಿನಲ್ಲಿ 25 ಮಂದಿ ಪ್ರಯಾಣಿಕರು ಇದ್ದರೆಂದು ತಿಳಿದು ಬಂದಿದೆ. 

ಸ್ಥಳೀಯಾಡಳಿತೆ ಮತ್ತು ಪೊಲೀಸರು ಸುದ್ದಿ ತಿಳಿದು ಒಡನೆಯೇ ಸ್ಥಳಕ್ಕೆ ಧಾವಿಸಿ ಬಂದು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next