Advertisement

ಶೀಘ್ರ 1ಲಕ್ಷ ಪೊಲೀಸರ ಭರ್ತಿ: ಎಂ.ಬಿ.ಪಾಟೀಲ್‌

11:00 PM Jun 23, 2019 | Team Udayavani |

ಮುದ್ದೇಬಿಹಾಳ: ಎಲ್ಲ ಠಾಣೆಗಳಲ್ಲಿ ಪೊಲೀಸರ ಕೊರತೆ ಇದ್ದು, ಇದನ್ನು ನೀಗಿಸಲು ಶೀಘ್ರವೇ 1 ಲಕ್ಷ ಪೊಲೀಸರನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ ಈಗಾಗಲೇ ಸ್ಕೇರ್‌ಸಿಟಿ ಯೋಜನೆಯಡಿ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಪ್ರಗತಿಯಲ್ಲಿದೆ. ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು ನಗರಗಳನ್ನೂ ಈ ಯೋಜನೆಯಡಿ ಸೇರಿಸಲು ಪ್ರಸ್ತಾವನೆ ಕಳಿಸಲಾಗಿದೆ.

ಬ್ರಿಟಿಷರು, ರಾಜ ಮಹಾರಾಜರ ಕಾಲದಲ್ಲಿದ್ದ ಪೊಲೀಸ್‌ ಬ್ಯಾಂಡ್‌ ಸೇವೆ ನಶಿಸುತ್ತಿದ್ದು, ಇದನ್ನು ಉಳಿಸಿ ಪ್ರೋತ್ಸಾಹಿಸಲು ಮತ್ತು ಬ್ಯಾಂಡ್‌ಗೆ ಉತ್ತೇಜನ ಕೊಡಲು ಭತ್ಯೆ ನೀಡುವ ಚಿಂತನೆ ನಡೆದಿದೆ ಎಂದರು. ಔರಾದ್ಕರ್‌ ಸಮಿತಿ ವರದಿಯ ಅನುಷ್ಠಾನ ಕಾರ್ಯ ರೂಪದಲ್ಲಿದ್ದು, ಬೇಡಿಕೆ ಈಡೇರಿಸಲು 830 ಕೋಟಿ ರೂ.ಆರ್ಥಿಕ ಹೊರೆ ಆಗುತ್ತದೆ.

ಈ ಬಗ್ಗೆ ಅಂತಿಮ ರೂಪ ನೀಡಲು ಸಿಎಂ 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಗೃಹ ಮತ್ತು ಹಣಕಾಸು ಇಲಾಖೆ ನಡುವೆ ಚರ್ಚೆ ಪ್ರಗತಿಯಲ್ಲಿದ್ದು, 8-10 ದಿನಗಳಲ್ಲಿ ಅಂತಿಮಗೊಂಡು 15-20 ದಿನಗಳಲ್ಲಿ ಪೊಲೀಸರಿಗೆ ಸಿಹಿ ಸುದ್ದಿ ಸಿಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next