Advertisement

ಆವಾಸ್‌ ಫಲಾನುಭವಿಗಳಿಗೆ 1.50 ಲಕ್ಷ

10:44 AM Oct 13, 2019 | Suhan S |

ಧಾರವಾಡ: ಮನೆ ಕಟ್ಟಿಸಿಕೊಳ್ಳಲು ಇಚ್ಛಿಸುವ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 1.50 ಲಕ್ಷ ಸಹಾಯಧನ ದೊರೆಯುತ್ತಿದ್ದು, ಯೋಜನೆಯ ಲಾಭ ಪಡೆಯಲು ಕೋರಲಾಗಿದೆ. ಯೋಜನೆ ಫಲಾನುಭವಿಗಳಾಗಲು ಇಚ್ಛಿಸಿರುವ ಕುಟುಂಬದ ಹೆಸರಿಗೆ ಈಗಾಗಲೇ ಪಕ್ಕಾ ಮನೆ ಇರಬಾರದು. ಫಲಾನುಭವಿಯು ಸ್ವಂತ ಜಾಗೆ ಅಥವಾ ಕಚ್ಚಾ ಮನೆ ಹೊಂದಿರಬೇಕು.

Advertisement

ಫಲಾನುಭವಿಯು ಸ್ವಂತ ಜಾಗೆಯಲ್ಲಿ ಮನೆ ಕಟ್ಟಿಕೊಳ್ಳಬಹುದು ಅಥವಾ ಮನೆ ವಿಸ್ತರಣೆ ಮಾಡಿಕೊಳ್ಳಬಹುದು. ಆದರೆ ಮನೆ ವಿಸ್ತರಣೆ ಬಯಸಿದ್ದಲ್ಲಿ ಕನಿಷ್ಟ 9 ಚಮೀಯಿಂದ 21 ಚಮೀ ವಿಸ್ತರಣೆ ಮಾಡಿಕೊಳ್ಳಬಹುದು.

ಒಂದು ವೇಳೆ ಹಾಲಿ ಮನೆ ಇದ್ದಲ್ಲಿ 30 ಚಮೀ ವರೆಗೆ ಇದ್ದಲ್ಲಿ, ವಿಸ್ತರಣೆಗೆ ಯೋಜನೆಯಲ್ಲಿ ಅವಕಾಶವಿರುವುದಿಲ್ಲ. ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ಮೀರಿರಬಾರದು. ಮಾಹಿತಿಗಾಗಿ ದೂ: 0836-2213848, ಮಂಜುನಾಥ ವಗರನಾಳ-9945350393, ಅಕ್ಕಮ್ಮ-9845105696 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next