Advertisement

1.37 ಕೋಟಿ ಮೌಲ್ಯದ ಅಕ್ರಮ ಮದ್ಯಸಾರ ವಶ

11:17 PM Nov 18, 2019 | Team Udayavani |

ಮೈಸೂರು: ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿ ಹಿನಕಲ್‌ ಕಡೆಗೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆಯ ಬಳಿ ಭಾನುವಾರ ರಾತ್ರಿ ನಾಲ್ಕು ಟ್ಯಾಂಕರ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.37 ಕೋಟಿ ರೂ.ಮೌಲ್ಯದ ಮದ್ಯಸಾರ ವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ. ತಂಗವಳ್ಳಿ ತಾಲೂಕಿನ ಗಣೇಶನ್‌, ಸೆಲ್ವರಸನ್‌, ಸೀನಗುಡಿ ಗ್ರಾಮದ ರಾಜೇಶ್‌ ಕಣ್ಣನ್‌, ಸುಜನ್‌ ಗಂಜ್‌ನ ದಾನ್‌ ಬಹದ್ದೂರ್‌ ಯಾದವ್‌ ಎಂಬುವರನ್ನು ಬಂಧಿಸಿದ್ದಾರೆ.

Advertisement

ಶಾಸಕ ಸುರೇಶ್‌ಗೌಡರ ವಿರುದ್ಧ ದೂರು: ನಾಗಮಂಗಲ ತಾಲೂಕಿನ ಅರಸೇಗೌಡನ ಕೊಪ್ಪಲು ಬಳಿಯ ಕೆರೆಗೆ ಬಾಗಿನ ಅರ್ಪಿ ಸುವ ವೇಳೆ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ಗಳ ಜೊತೆಗೂಡಿ ಶಾಸಕ ಸುರೇಶ್‌ಗೌಡ ಸರ್ಕಾರಿ ಜೀಪ್‌ನಲ್ಲಿ ಹೋಗಿ ದ್ದು, ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ದೂರು ನೀಡಲಾಗಿದೆ. ಈ ಕುರಿತು ಚುನಾವಣಾ ಶಾಖೆಯ ಶಿರಸ್ತೇ ದಾರ್‌ ಅವರಿಗೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಜೆ.ರಾಜೇಶ್‌ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next