Advertisement

Theft Case: ಉಪ್ಪಳದಲ್ಲಿ ಎ.ಟಿ.ಎಂ.ಗೆ ತುಂಬಿಸಲು ತಂದ ಹಣ ಕಳವು ಮಾಡಿದ್ದು “ತಿರುಟ್‌’ ತಂಡ

09:41 PM Apr 04, 2024 | Team Udayavani |

ಉಪ್ಪಳ: ಉಪ್ಪಳದ ಖಾಸಗಿ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಿಸಲೆಂದು ಬಂದ ವಾಹನದಿಂದ ಮಾರ್ಚ್‌ 27 ರಂದು ಹಾಡುಹಗಲೇ 50 ಲಕ್ಷ ರೂ. ಕಳವು ಮಾಡಿದ್ದು ತಮಿಳುನಾಡಿನ “ತಿರುಟ್‌’ ತಂಡಕ್ಕೆ ಸೇರಿದವರಾಗಿದ್ದಾರೆಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.

Advertisement

ಈ ತಂಡದಲ್ಲಿ 30 ಮಂದಿ ಇದ್ದಾರೆನ್ನಲಾಗಿದೆ.ಈ ತಂಡ ಕಳವು, ದರೋಡೆ ಮಾತ್ರವಲ್ಲ ಸ್ಪಿರಿಟ್‌ ಸಾಗಾಟ ದಂದೆಯನ್ನೂ ನಡೆಸುತ್ತಿದ್ದಾರೆ. ಈ ದಂಧೆಯಿಂದ ಐಶಾರಾಮಿ ಜೀವನ ನಡೆಸುವುದು ಇವರ ರೀತಿಯಾಗಿದೆ. ಒಂದೇ ಸ್ಥಳದಲ್ಲಿ ಖಾಯಂ ನಿಲ್ಲದೆ ಅಲೆಮಾರಿಗಳಂತೆ ಅಲೆದಾಡುತ್ತಿದ್ದಾರೆ. ದರೋಡೆಗೆ ಮುನ್ನ ಸ್ಥಳವನ್ನು ಪರಿಚಯ ಮಾಡಿಕೊಂಡು ಸ್ಕೆಚ್‌ ಹಾಕಿಕೊಳ್ಳುತ್ತಾರೆ. ಈ ತಂಡ ಮಂಗಳೂರಿನಿಂದ ಬಂದು ಕಳವು ಮಾಡಿದ ಬಳಿಕ ಆಟೋ ರಿಕ್ಷಾದಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ಬಂದಿದ್ದರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಕಾಸರಗೋಡಿನಿಂದ ರೈಲಿನಲ್ಲಿ ಎಲ್ಲಿಗೆ ಹೋದರೆಂಬುದು ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ಕರ್ನಾಟಕ ಹಾಗು ತಮಿಳುನಾಡು ಪೊಲೀಸರ ನೆರವನ್ನು ಕೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next