Advertisement

ಪತ್ರಕರ್ತರ ಮೇಲೆ ಹಲ್ಲೆ ಆರೋಪ : ಮಾಜಿ ಸಿಎಂ ಅಖಿಲೇಶ್ ಯಾದವ್ ವಿರುದ್ಧ ಎಫ್‍ಐಆರ್  

06:55 PM Mar 13, 2021 | Team Udayavani |

ಲಕ್ನೋ :  ಪತ್ರಕರ್ತರ ಮೇಲೆ ಹಲ್ಲೆಯ ಆರೋಪದಡಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿರುದ್ಧ  ಎಫ್‍ಐಆರ್ ದಾಖಲಾಗಿದೆ.

Advertisement

ಮಾರ್ಚ್ 11 ರಂದು ಖಾಸಗಿ ಹೋಟೆಲ್‍ನಲ್ಲಿ ಅಖಿಲೇಶ್ ಯಾದವ್ ನಡೆಸಿದ ಪತ್ರಿಕಾಗೋಷ್ಟಿ ವೇಳೆ ಎಸ್‍ಪಿ ನಾಯಕರು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ದೃಶ್ಯ ಮಾಧ್ಯಮ ವಾಹಿನಿಯ ಕ್ಯಾಮೆರಾ ಮ್ಯಾನ್ ಫರೀದ್ ಶಂಶಿ ಎಂಬುವರ ಕಾಲಿಗೆ ಗಾಯವಾಗಿತ್ತು.

ಇನ್ನು ಎಸ್‍ಪಿ ನಾಯಕರ ದುಂಡಾವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಧ್ಯಮಗಳ ಮೇಲೆ ದೌರ್ಜನ್ಯ ಸಲ್ಲದು ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಪತ್ರಿಕಾರಂಗದ ಮೇಲೆ ಸಮಾಜವಾದಿ ಪಕ್ಷದ ನಾಯಕರು ನಡೆಸಿರುವ ದೌರ್ಜನ್ಯಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ.

ಘಟನೆ ಕುರಿತು ಇಂದು (ಮಾರ್ಚ್ 13) ಪತ್ರಕರ್ತರ ಸಂಘದ ಅಧ್ಯಕ್ಷ ಅವಧೇಶ್ ಪರಾಶರ್ , ಮೊರದಾಬಾದ್‍ನಲ್ಲಿರುವ ಪಾಕಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 147, 342, 323 ನಡಿ ಅಖಿಲೇಶ್ ಯಾದವ್ ಹಾಗೂ ಸಮಾಜವಾದಿ ಪಕ್ಷದ 20 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next