Advertisement

ಖಲಿಸ್ತಾನಿ ತಂಟೆಗೆ ಬಂದರೆ ಇಂದಿರೆಯ ಗತಿ ನಿಶ್ಚಿತ! ಅಮೃತ್‌ ಪಾಲ್‌ ಸಿಂಗ್‌

07:23 PM Feb 23, 2023 | Team Udayavani |

ಅಮೃತಸರ: ಖಲಿಸ್ತಾನ್‌ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಹತ್ತಿಕ್ಕಲು ನೋಡಿದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅದಕ್ಕೆ ತಕ್ಕ ಬೆಲೆ ತತ್ತಿದ್ದಾರೆ.

Advertisement

ಈಗಲೂ ಅಷ್ಟೇ, ಪ್ರಧಾನಿ ಮೋದಿ, ಅಮಿತ್‌ ಶಾ, ಭಗವಂತ್‌ಮಾನ್‌ ಯಾರೇ ಬಂದರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ವಿಚಾರಕ್ಕೆ ಬಂದರೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಖಲಿಸ್ತಾನಿಗಳ ಪರ ನಾಯಕ ಅಮೃತ್‌ ಪಾಲ್‌ ಸಿಂಗ್‌ ಬಹಿರಂಗವಾಗಿಯೇ ಸವಾಲೆಸೆದಿದ್ದಾನೆ.

ಪೊಲೀಸರು ಬಂಧಿಸಿರುವ ಅಮೃತ್‌ಪಾಲ್‌ ಸಹಚರ ಲವ್‌ಪ್ರೀತ್‌ ತೂಫಾನ್‌ನನ್ನು ಬಿಡುಗಡೆಗೊಳಿಸುವಂತೆ ಖಲಿಸ್ತಾನ್‌ ಪರ ಸಂಘಟನೆ ವಾರಿಸ್‌ ಪಂಜಾಬ್‌ ದೇ ಬೆಂಬಲಿಗರು ಅಮೃತ್‌ನ ನಾಯಕತ್ವದಲ್ಲಿ ಅಜ್ನಾಲ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಕತ್ತಿ, ಬಂದೂಕುಗಳನ್ನು ಹಿಡಿದು ಪೊಲೀಸರನ್ನು ಬೆದರಿಸಿ, ಬ್ಯಾರಿಕೇಡ್‌ ಕೂಡ ಮುರಿದು ಹಾಕಿದ್ದಾರೆ.

ಘಟನೆಯಲ್ಲಿ 6 ಮಂದಿ ಪೊಲೀಸರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಮಾತನಾಡಿದ ಅಮೃತ್‌, ಜನರು ಹಿಂದೂರಾಷ್ಟ್ರ ಕೇಳುವಾಗ ನಾವು ಏಕೆ ಖಲಿಸ್ತಾನ ಕೇಳಬಾರದು. ನಮ್ಮ ದಾರಿಗೆ ಅಡ್ಡ ಬಂದರೆ ಇಂದಿರಾ ಗಾಂಧಿ ತೆತ್ತ ಬೆಲೆಯನ್ನೇ ತೆರಬೇಕಾಗುತ್ತದೆ. ಲವ್‌ಪ್ರೀತ್‌ನನ್ನು ಬಿಡುಗಡೆಗೊಳಿಸದೇ ಹೋದರೆ, ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next