Advertisement

ಕೇವಲ ಫೋಟೋ ಕಷ್ಟೇ ಸೀಮಿತವಾದ ಭಾರತೀಯ ಪ್ರಾಕೃತಿಕ ಕೃಷಿ ಸಮ್ಮೇಳನ

09:30 PM Apr 26, 2022 | Team Udayavani |

ಗಂಗಾವತಿ : ಕೇಂದ್ರ ಸರ್ಕಾರ ಭಾರತೀಯ ಖುಷಿಯನ್ನು ಭಾರತೀಯ ಪ್ರಾಕೃತಿಕ ಕೃಷಿ ಪದ್ಧತಿಯಂತೆ ನಡೆಸಲು ಹಲವಾರು ಕಾರ್ಯಕ್ರಮಗಳನ್ನು ಪ್ರಾಂತೀಯ ಭಾಷೆಗಳಲ್ಲಿ ಆಯೋಜನೆ ಮಾಡಿದೆ .ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಭಾರತೀಯ ಸಾಂಸ್ಕೃತಿಕ ಕೃಷಿ ಪದ್ದತಿ ಸಮ್ಮೇಳನ ಸಕ್ಕರೆಗೆ ರೈತರಿಗೆ ಮಾಧ್ಯಮದವರಿಗೆ ಮಾಹಿತಿ ನೀಡದೆ ಅಧಿಕಾರಿಗಳು ಮಂಗಳವಾರ ಆಯೋಜನೆ ಮಾಡಿದ್ದರು .

Advertisement

ಕೇಂದ್ರ ಸರ್ಕಾರ ದೇಶದ ಕೃಷಿಯನ್ನು ಸಮಗ್ರ ಕೃಷಿಪದ್ಧತಿ ಅನುಸಾರ ಹಾಗೂ ಹೈನುಗಾರಿಕೆ, ಪಶುಸಂಗೋಪನೆ,ಜೇನು ಸಾಕಾಣಿಕೆ, ರೇಷ್ಮೆ ಸಾಕಾಣಿಕೆ ಸೇರಿದಂತೆ ಕೃಷಿಗೆ ಸಂಬಂಧಿಸಿದಂತಹ ಉಪಕಸುಬುಗಳನ್ನು ಪ್ರೋತ್ಸಾಹಿಸುವ ಸಾಂಸ್ಕೃತಿಕ ಸಮ್ಮೇಳನವನ್ನು ಆಯೋಜನೆ ಮಾಡಲಾಗಿತ್ತು .ರೈತರ ಬದುಕನ್ನು ಬದಲಾವಣೆ ತರುವ ಇಂತಹ ಕಾರ್ಯಕ್ರಮಗಳನ್ನು ಕೃಷಿ ವಿಜ್ಞಾನ ಕೇಂದ್ರ ರಾಯಚೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ಇಲಾಖೆಯ ಆತ್ಮ ಯೋಜನೆಯಡಿಯಲ್ಲಿ ನಡೆಸುವಂತೆ ಕೇಂದ್ರ ಸರ್ಕಾರ ಸುತ್ತೋಲೆ ಮೂಲಕ ಆದೇಶ ನೀಡಿತ್ತು .ಆದರೆ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ತರಾತುರಿಯಲ್ಲಿ ಕೆಲವೇ ಕೆಲವು ರೈತರನ್ನು ಆಹ್ವಾನಿಸುವ ಮೂಲಕ ಭಾರತೀಯ ಪ್ರಾಕೃತಿಕ ಕೃಷಿ ಸಮ್ಮೇಳನವನ್ನು ಆಯೋಜನೆ ಮಾಡಿತ್ತು .ಸಮ್ಮೇಳನದ ಶಾಸಕ ಪರಣ್ಣ ಮುನವಳ್ಳಿ ಅವರಿಗೂ ಅಧಿಕಾರಿಗಳು ಮಾಹಿತಿ ನೀಡಲಿಲ್ಲ ಇದರಿಂದ ಶಾಸಕರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರು.

ಕೃಷಿಯನ್ನು ಸಮಗ್ರವಾಗಿ ಬೆಳೆಸುವ ಮೂಲಕ ರೈತರ ಆರ್ಥಿಕತೆಯನ್ನು ಸದೃಢ ಮಾಡಬೇಕಾದ ಈ ಕಾರ್ಯಕ್ರಮವನ್ನು ರೈತರಿಗೆ ಮಾಹಿತಿ ನೀಡದೆ ಮಾಡಿದ್ದು ಕಂಡುಬಂತು.

ಇದನ್ನೂ ಓದಿ : ನಶೆ ಪ್ರಿಯರ ಜೇಬಿಗೆ ಬೀಳಲಿದೆ ಕತ್ತರಿ! ಬಿಯರ್‌ ದರ ಶೇ. 10-15 ಹೆಚ್ಚಳ?

ಕೃಷಿ ಸಮ್ಮೇಳನ ಕುರಿತು ಮಾಹಿತಿ ಪಡೆದುಕೊಂಡ ಶಾಸಕ ಪರಣ್ಣ ಮುನವಳ್ಳಿ ಅವರು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಸರ್ಕಾರದ ಹಲವಾರು ಕೃಷಿ ಪರ ಯೋಜನೆಗಳನ್ನು ರೈತರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಭಾರತೀಯ ಪ್ರಾಕೃತಿಕ ಕೃಷಿ ಸಮ್ಮೇಳನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಆಯೋಜನೆ ಮಾಡಿದ್ದು ಇದನ್ನುರೈತರಿಗೆ ಬಹಿರಂಗವಾಗಿ ಮಾಹಿತಿ ನೀಡುವ ಮೂಲಕ ಸಮ್ಮೇಳನ ಆಯೋಜನೆ ಮಾಡಬೇಕು .ತಮ್ಮ ಗಮನಕ್ಕೂ ತಾರದೆ ಮಾಧ್ಯಮದ ಗಮನಕ್ಕೆ ತಾರದೆ ತಮ್ಮಳ್ಳ ಆಯೋಗ ಮಾಡಿದ್ದರ ಕುರಿತು ಆಕ್ಷೇಪವೆತ್ತಿದ್ದಾರೆ .ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಆದೇಶ ನೀಡಿದ್ದಾರೆ .

Advertisement

ನಾಮಕಾವಸ್ತೆ ಸಮ್ಮೇಳನ : ಪ್ರಸ್ತುತ ಭಾರತೀಯ ಕೃಷಿ ಪದ್ದತಿ ಯ ಪುನರುತ್ಥಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾರತೀಯ ಪ್ರಾಕೃತಿಕ ಸಮ್ಮೇಳನದ ಮೂಲಕ ಸಮಗ್ರ ಕೃಷಿಯನ್ನು ಮಾರಲು ರೈತರಿಗೆ ಮನವರಿಕೆ ಮಾಡುವ ಸಮ್ಮೇಳನವನ್ನು ಶಾಸಕರಿಗೆ ರೈತರಿಗೆ ಮಾಧ್ಯಮದವರಿಗೆ ಮಾಹಿತಿ ನೀಡದೆ ಆಯೋಜನೆ ಮಾಡಲು ತಪ್ಪು ಆದ್ದರಿಂದ ಮತ್ತೊಮ್ಮೆ ಭಾರತೀಯ ಪ್ರಕಾಶಕರ ಸಮ್ಮೇಳನ ಆಯೋಜನೆ ಮಾಡಿ ಆರೋಗ್ಯ ಸಮಸ್ಯೆ ರೈತರನ್ನು ಆಹ್ವಾನಿಸಿ ಅವರಿಗೆ ಸಮಗ್ರ ಕೃಷಿ ಮತ್ತು ಪೂರಕ ಕೃಷಿ ಬಗ್ಗೆ ಮಾಹಿತಿ ನೀಡುವಂತೆ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಪ್ರಸಾದ್ ಕಲಗುಡಿ ಒತ್ತಾಯಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next