Advertisement

ಕೆರೆ ಹೂಳೆತ್ತುವಿಕೆಯಿಂದ ಅಂತರ್ಜಲ ಹೆಚ್ಚಳ

05:31 PM Apr 25, 2019 | Team Udayavani |

ಸೈದಾಪುರ: ಕೆರೆಗಳ ಹೂಳು ತೆಗೆಯುವುದರಿಂದ ಮಳೆ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟದ ಹೆಚ್ಚಾಗುತ್ತದೆ ಎಂದು ಭಾರತೀಯ ಜೈನ ಸಂಘದ ಗುರುಮಠಕಲ್ ತಾಲೂಕು ಅಧ್ಯಕ್ಷ ಶರಣಿಕಕುಮಾರ ದೋಖಾ ಹೇಳಿದರು.

Advertisement

ಜೈಗ್ರಾಂ ಗ್ರಾಮದ ಕೆರೆಯಲ್ಲಿ ಬುಧವಾರ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೆರೆ ಹೂಳು ತೆಗೆಯುವ ಯೋಜನೆಗೆ ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಕೆರೆ ಹೂಳನ್ನು ರೈತರು ತಮ್ಮ ಹೊಲಗದ್ದೆಗಳಿಗೆ ಹಾಕಿಸಿಕೊಂಡರೆ ಫಲವತ್ತತೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಭಾರತೀಯ ಜೈನ ಸಂಘ ಕೆರೆ ಹೂಳೆತ್ತುವ ಕಾಮಗಾರಿಗೆ ಸಂಬಂಧಿಸಿದಂತೆ ಆಯಾ ರಾಜ್ಯ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕರ್ನಾಟಕ ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಸೇರಿದಂತೆ ದೇಶದ 130 ಜಿಲ್ಲೆಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ. ರೈತರ ಬೇಡಿಕೆಗೆ ಅನುಸಾರ ಅವಶ್ಯವಿರುವ ತಾಲೂಕಿನ ಎಲ್ಲ ಕೆರೆಗಳಲ್ಲಿ ಹೂಳೆ ತೆಗೆಯಲಾಗುವುದು ಎಂದು ಹೇಳಿದರು.

ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ಚಂದ್ರಶೇಖರ ವಾರದ, ಮಹಿಪಾಲರೆಡ್ಡಿ ದುಪ್ಪಲ್ಲಿ, ಮಲ್ಲಣ್ಣ ಜೈಗ್ರಾಂ, ಸುದರ್ಶನ ಪಾಟೀಲ ಜೈಗ್ರಾಂ, ರಾಕೇಶ ದೋಖಾ, ಸಂದೀಪ ದೋಖಾ ಸೇರಿದಂತೆ ಮುಂತಾದವರಿದ್ದರು.

ಹೆಚ್ಚಿದ ಬೇಡಿಕೆ
ಕೆರೆ ಹೂಳೆತ್ತುವ ಕಾರ್ಯದಿಂದ ಪುಳಕಿತಗೊಂಡಿರುವ ರೈತರು ತಮ್ಮೂರಿನ ಕೆರೆ ಹೂಳು ತೆಗೆಸುವಂತೆ ಬಿಜೆಎಸ್‌ಗೆ ದುಂಬಾಲು ಬಿದ್ದಿದ್ದಾರೆ. ಬದ್ದೇಪಲ್ಲಿ, ರಾಂಪುರ, ಕರಣಿಗಿ, ಜೈಗ್ರಾಂ ಕೆರೆಗಳ ಹೂಳು ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ. ಹೆಚ್ಚಿನದಾಗಿ ನಸಲವಾಯಿ, ವಂಕಸಂಬರ ಕೆರೆಗಳ ಹೂಳೆತ್ತಲು ಕಾರ್ಯಾರಂಭಿಸುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಸಮಾಲೋಚನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. •ಶರಣಿಕಕುಮಾರ ದೋಖಾ,
ಅಧ್ಯಕ್ಷರು ಬಿಜೆಎಸ್‌ ಗುರುಮಠಕಲ್ ತಾಲೂಕು ಘಟಕ

Advertisement
Advertisement

Udayavani is now on Telegram. Click here to join our channel and stay updated with the latest news.

Next