10 ವಿದ್ಯಾರ್ಥಿಗಳು ಸೇರಿಕೊಂಡು ಶಿಕ್ಷಕರಿಗೆ ಪ್ರಶ್ನೆ ಮಾಡುತ್ತಾರೆ. ಅವರು ಸೂಕ್ತವಾದ
ಉತ್ತರವನ್ನು ನೀಡುತ್ತಾರೆ. ಇದನ್ನು ರೆಕಾರ್ಡ್ ಮಾಡಿ ಇಟ್ಟು ಅಗತ್ಯವಿದ್ದಾಗ ಕೇಳಿಕೊಂಡು ಪುನರಾವರ್ತನೆ ಮಾಡಲು ಸಹಾಯ ಮಾಡುತ್ತದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನೆರವಾಗುತ್ತದೆ.
Advertisement
ಒಂದು ಕಾಲವಿತ್ತು. ಕೇವಲ ಕ್ಲಾಸ್ರೂಂನಲ್ಲಿ ಶಿಕ್ಷಕರು ಮಾಡಿದ ಪಾಠವನ್ನೇ ಮನೆಯಲ್ಲಿ ಉರು ಹೊಡೆಯಬೇಕಿತ್ತು. ಅದೂ ಮನೆಯಲ್ಲಿ ಓದಿದರಾಯಿತು; ಇಲ್ಲವಾದರೆ ಇಲ್ಲ. ಆದರೀಗ ಕಾಲ ಬದಲಾಗಿದೆ. ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಲಿಕಾ ವಿಧಾನದಲ್ಲಿ ಬದಲಾವಣೆ ಮಾಡುವುದರೊಂದಿಗೆ ಆಧುನಿಕ ಶಿಕ್ಷಣ ಪದ್ಧತಿ ವ್ಯವಸ್ಥೆಗೆ ತೆರೆದುಕೊಳ್ಳುವಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ಎಂದೇ ಹೇಳಬಹುದು.
ನಗರ ಪ್ರದೇಶಗಳಲ್ಲಿನ ಪ್ರತಿಷ್ಠಿತ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳಿಗೆಂದೇ ವಾಟ್ಸಪ್ ಗ್ರೂಪ್ ಗಳನ್ನು ಮಾಡಿಕೊಂಡು ವಾಟ್ಸಪ್ ಮುಖಾಂತರ ಬೋಧನೆ ಮಾಡುತ್ತಿರುವುದು ಹಳೆಯ ಸುದ್ದಿ. ಅದರೊಂದಿಗೆ, ನಗರ ಪ್ರದೇಶದವರೊಂದಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಹೊಸ ತಂತ್ರಜ್ಞಾನಾಧಾರಿತ ಶಿಕ್ಷಣ ಸಿಗುವಂತಾಗಬೇಕೆಂದು ಶಿಕ್ಷಕರು ಮಾಡಿದ ಹೊಸ ಪ್ರಯತ್ನ ಈಗ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗುತ್ತದೆ. ಸುಮಾರು 10 ವಿದ್ಯಾರ್ಥಿಗಳಿಗೆ ಕರೆ ಮಾಡಿ ಅವರ ಮೊಬೈಲ್ ಸಂಖ್ಯೆಗಳನ್ನು ಕಾನ್ಫರೆನ್ಸ್ಗೆ ಹಾಕಿ ಆ ಮೂಲಕ
ಬೋಧನೆ ಮಾಡುವಂಥದ್ದು ಕಾನ್ಫರೆನ್ಸ್ ಕರೆ. ನಾಲ್ಕಾರು ಮಂದಿ ಒಟ್ಟಿಗೆ ಸೇರಿಕೊಂಡು ಮಾತನಾಡಲು ಮಾತ್ರ ಸೀಮಿತವಾಗಿದ್ದ ಕಾನ್ಫರೆನ್ಸ್ ಕರೆ ಸೌಲಭ್ಯ ಈಗ ಶಿಕ್ಷಣದಲ್ಲಿಯೂ ಬಳಕೆಯಾಗುತ್ತಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಏರಿಕೆಗೆ ಅತ್ಯುತ್ತಮ ವಿಧಾನವಾಗಿದೆ.
Related Articles
ಶಾಲಾ ಅವಧಿ ನಿಗದಿಪಡಿಸಿದಂತೆಯೇ ಇರುತ್ತದೆ. ಕಾನ್ಫರೆನ್ಸ್ ಕರೆ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಶಾಲಾ ಅವಧಿಯನ್ನು ಬಳಸಿಕೊಳ್ಳಲಾಗುವುದಿಲ್ಲ. ಸಂಜೆ ಮಕ್ಕಳು ಮನೆಗೆ ತೆರಳಿದ ಅನಂತರ ನಿರ್ದಿಷ್ಟ ಸಮಯವೊಂದನ್ನು ನಿಗದಿಪಡಿಸಿ ಶಿಕ್ಷಕರು ಕಾನ್ಫರೆನ್ಸ್ ಕರೆ ಮಾಡಿ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಬೋಧನೆ ಆರಂಭಿಸುತ್ತಾರೆ.
Advertisement
ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಗುರಿವಿಶೇಷವಾಗಿ ಕಾನ್ಫರೆನ್ಸ್ ಕರೆ ಮಾಡಿ ಬೋಧಿಸುವ ಉದ್ದೇಶ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಪರೀಕ್ಷೆಗೆ ತಯಾರು ಮಾಡುವುದಕ್ಕಾಗಿ. ಇದರಿಂದ ಕ್ಲಾಸ್
ರೂಂ ಶಿಕ್ಷಣದೊಂದಿಗೆ ಮನೆಯಲ್ಲಿ ಮೊಬೈಲ್ ಮೂಲಕ ಶಿಕ್ಷಣವೂ ದೊರಕಿ ಅವರು ಕಲಿಕೆಯಲ್ಲಿ ಮುಂಚೂಣಿಗೆ ಬರಲು ಸುಲಭವಾಗಬಹುದು ಎನ್ನುವುದು ಶಿಕ್ಷಕರ ಪ್ರಯತ್ನ. ಕಾನ್ಫರೆನ್ಸ್ ಕರೆ ಮಾಡಿ ಬೋಧನೆ ಮಾಡುವುದರಿಂದ ಮಕ್ಕಳಿಗೆ ಆಯಾ ದಿನದ ತರಗತಿ ಪಾಠದೊಂದಿಗೆ ಇನ್ನೊಮ್ಮೆ ಪಾಠ ಮನನ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಗೊಂದಲಗಳನ್ನು ನಿವಾರಿಸಿಕೊಳ್ಳಲೂ ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ವಿಧಾನ
ಎನ್ನುತ್ತಾರೆ ಶಿಕ್ಷಕಿ ವಾರಿಜಾ ಬೆಳ್ಳಾರೆ. ವಿದ್ಯಾರ್ಥಿಗಳಿಗೆ ಲಾಭ
ತರಗತಿಯಲ್ಲಾದರೆ, ಕಡಿಮೆ ಎಂದರೂ 40- 50 ಮಕ್ಕಳಿರುತ್ತಾರೆ. ಇಂತಹ ವೇಳೆ ಕೆಲವೊಮ್ಮೆ ಪಾಠ ಅರ್ಥವಾಗದಿದ್ದರೆ ಕೇಳುವುದು ವಿದ್ಯಾರ್ಥಿಗಳಿಗೆ ಮುಜುಗರ ತರುವ ವಿಷಯವಾಗಿರುತ್ತದೆ. ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳಿಂದ ಅವಮಾನ ಎದುರಿಸಬೇಕಾದ ಪ್ರಸಂಗ ಬರುತ್ತದೆ ಎಂಬ ಕಾರಣಕ್ಕಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಸಂಶಯ ನಿವಾರಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಕಾನ್ಫರೆನ್ಸ್ ಕಾಲ್ನಲ್ಲಿ ಗರಿಷ್ಠ 10 ಮಂದಿ ವಿದ್ಯಾರ್ಥಿಗಳಷ್ಟೇ ಇರುವುದರಿಂದ ಇಂತಹ ಮುಜುಗರಗಳು ಉಂಟಾಗುವುದಿಲ್ಲ. ಯಾವುದೇ ಅವಮಾನಗಳ ಫಜೀತಿ ಇಲ್ಲದೆ, ವಿದ್ಯಾರ್ಥಿಗಳು ತಮ್ಮ ಅನುಮಾನಗಳನ್ನು ಬಗೆ ಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಧನ್ಯಾ ಬಾಳೆಕಜೆ