Advertisement

ಇಂದ್ರಜಿತ್ ಅಪ್ಪನಿಗೆ ಹುಟ್ಟಿದ್ದರೆ ದಾಖಲೆ ಬಿಡುಗಡೆ ಮಾಡಲಿ : ದರ್ಶನ್ ಓಪನ್ ಚಾಲೆಂಜ್

06:17 PM Jul 17, 2021 | Team Udayavani |

ಮೈಸೂರು:  ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಓಪನ್ ಚಾಲೆಂಜ್ ಹಾಕಿದ್ದಾರೆ. ತಮ್ಮನ್ನು ಅನ್ ಎಜ್ಯುಕೆಟೆಡ್ ಎಂದಿರುವ ಇಂದ್ರಜಿತ್ ಗೆ ಸವಾಲು ಹಾಕಿರುವ ದಚ್ಚು, ‘ ಅವನಿಗೆ ಯೋಗ್ಯತೆ ಇದ್ರೆ ಒಂದು ಚೆನ್ನಾಗಿರೋ ಸಿನಿಮಾ ನಿರ್ದೇಶನ ಮಾಡಲಿ ಎಂದಿದ್ದಾರೆ.

Advertisement

ನಾನು  ಅನ್ ಎಜ್ಯುಕೆಟೆಡ್ ಆದರೂ ಕೂಡ ಕುರುಕ್ಷೇತ್ರನೂ ಮಾಡ್ತೀನಿ, ಸಂಗೊಳ್ಳಿ ರಾಯಣ್ಣನೂ ಮಾಡ್ತೀನಿ, ಮೆಜೆಸ್ಟಿಕ್ ಸಿನಿಮಾ ಕೂಡ ಮಾಡ್ತೀನಿ. ಅವನಿಗೆ ಯೋಗ್ಯತೆ ಇದ್ರೆ ಒಂದು ಸಿನಿಮಾ ಮಾಡಲಿ ಎಂದು ಸವಾಲು ಹಾಕಿದರು.

ಇಂದ್ರಜಿತ್ ಅಪ್ಪನಿಗೆ ಹುಟ್ಟಿದ್ದೆಯಾದರೆ, ಅವನು ಗಂಡಸೇ ಆಗಿದ್ದರೆ ನನ್ನ ವಿರುದ್ಧದ ದಾಖಲೆಗಳನ್ನು ಬಿಡಲಿ ಎಂದು ಡಿ ಬಾಸ್ ಕಿಡಿ ಕಾರಿದರು.

ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಇಂದ್ರಜಿತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದ್ರಜಿತ್ ಅವರು ಗಾಂಡುಗಿರಿ ಅಂತ ನನ್ನ ವಿರುದ್ಧ ಪದ ಬಳಕೆ ಮಾಡಿದ್ದಾರೆ. ಇಂದ್ರಜಿತ್ ಅವರು ಎಷ್ಟು ಬೇಕಾದರೂ ದಾಖಲೆ ರಿಲೀಸ್ ಮಾಡಲಿ. ನಾನು ಕೇರ್ ಮಾಡಲ್ಲ. ದೊಡ್ಮನೆ ಅನ್ನ ತಿಂದು ಬಂದಿರೋದು ನಾವು. ದೊಡ್ಮನೆಯಲ್ಲಿ ನಮ್ಮಪ್ಪ ಅನ್ನ ತಿಂದಿದ್ದಾರೆ. ನಾನು ಕೂಡ ದೊಡ್ಮನೆ ಕುಟುಂಬದಲ್ಲಿಯೇ ಬೆಳೆದಿದ್ದೇನೆ. ನಾನೇನು ಮರ್ಡರ್ ಮಾಡಿದ್ದೇನಾ ಎಂದು ಪ್ರಶ್ನಿಸಿದರು.

ಒಂದಕ್ಕೊಂದು ವಿವಾದಗಳು ಹುಟ್ಟುತ್ತಿವೆ. ರಾಜ್ ಕುಮಾರ್ ಕುಟುಂಬಕ್ಕೂ ಆಸ್ತಿ ವಿವಾದಕ್ಕೂ ಸಂಬಂಧವಿಲ್ಲ. ಉಮಾಪತಿ ಬೇಕುಂತಲೇ 25 ಕೋಟಿ ರೂ. ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ಜೋಗಿ ಪ್ರೇಮ್ ಕಡೆಯಿಂದ ಉಮಾಪತಿ ಪರಿಚಯವಾಗಿದೆ. ಒಂದು ಸಿನಿಮಾ ಮಾಡೋಣ ಅಂತ ಹೇಳಿದ್ರು ಅಂದ್ರು.

Advertisement

ಉಮಾಪತಿ ಬಳಿ ನಾನು ಪ್ರಾಪರ್ಟಿ ಕೇಳಿಲ್ಲ. ಅವರಿಗೆ ನಾನು ಫೋನ್ ಮಾಡಿಲ್ಲ. 70 ದಿನದ ಬಳಿಕ ನಾನು ಯಾರಿಗೂ ಡೇಟ್ ಕೊಡಲ್ಲ. ನಾವೆಲ್ಲ ಮೂರು ಬಿಟ್ಟು ನಿಂತವೇ ಆಗಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next